<p><strong>ಶಿಗ್ಗಾವಿ</strong>: ‘ಬದುಕಿನ ಮೌಲ್ಯ ಹೆಚ್ಚಳಕ್ಕೆ ಕಾಯಕ ನಿಷ್ಠೆ ಕಾರಣವಾಗಿದ್ದು, ಅದರಿಂದ ತಾರತಮ್ಯ ಭಾವನೆ, ವ್ಯಾಜ್ಯಗಳು ದೂರಾಗುವ ಮೂಲಕ ಸಮಸಮಾಜ ನಿರ್ಮಾಣ ಸಾಧ್ಯವಿದೆ’ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ವಿರಕ್ತಮಠದ ಮತ್ತು ಬಸವ ಸೇವಾ ಸಮಿತಿ ವತಿಯಿಂದ ಬುಧವಾರ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ನಡೆದ ಬಸವಣ್ಣನವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಶರಣ ಸಮುದಾಯದ ಬೆಳವಣಿಗೆಯಲ್ಲಿ ಬಸವಣ್ಣನವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಅವರಂತಹ ಮಹಾನ್ ಸಮಾಜ ಸುಧಾರಕರು ಮತ್ತು ಕವಿಗಳನ್ನು ಶರಣ ಸಮುದಾಯ ಸೃಷ್ಟಿಸಿತು. ಅವರ ನಂಬಿಕೆಗಳು ಮತ್ತು ಬೋಧನೆಗಳು ಅದ್ಭುತ’ ಎಂದರು.</p>.<p>ಮುಖಂಡರಾದ ರಾಜಣ್ಣ ವಿರಕ್ತಮಠ, ಸಂಗಪ್ಪ ಕಂಕಣವಾಡ, ಪವನ ಹಾವೇರಿ, ಮಂಜುನಾಥ ಮಳ್ಳೂರು, ಈರಣ್ಣ ಅಂಕಲಕೋಟಿ, ಬಸವರಾಜ ಹಿರೇಮಠ, ರಮೇಶ ಹೊಟ್ಟುರ, ಸುರೇಶ ಹೊಟ್ಟುರ, ಮಾಲತೇಶ ಯಲಿವಿಗಿ, ಲಕ್ಷ್ಮಣ ಕಬನೂರ, ರಮೇಶ ವನಹಳ್ಳಿ, ಮುರಿಗೆಪ್ಪ ಕಾರಡಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ</strong>: ‘ಬದುಕಿನ ಮೌಲ್ಯ ಹೆಚ್ಚಳಕ್ಕೆ ಕಾಯಕ ನಿಷ್ಠೆ ಕಾರಣವಾಗಿದ್ದು, ಅದರಿಂದ ತಾರತಮ್ಯ ಭಾವನೆ, ವ್ಯಾಜ್ಯಗಳು ದೂರಾಗುವ ಮೂಲಕ ಸಮಸಮಾಜ ನಿರ್ಮಾಣ ಸಾಧ್ಯವಿದೆ’ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ವಿರಕ್ತಮಠದ ಮತ್ತು ಬಸವ ಸೇವಾ ಸಮಿತಿ ವತಿಯಿಂದ ಬುಧವಾರ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ನಡೆದ ಬಸವಣ್ಣನವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಶರಣ ಸಮುದಾಯದ ಬೆಳವಣಿಗೆಯಲ್ಲಿ ಬಸವಣ್ಣನವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಅವರಂತಹ ಮಹಾನ್ ಸಮಾಜ ಸುಧಾರಕರು ಮತ್ತು ಕವಿಗಳನ್ನು ಶರಣ ಸಮುದಾಯ ಸೃಷ್ಟಿಸಿತು. ಅವರ ನಂಬಿಕೆಗಳು ಮತ್ತು ಬೋಧನೆಗಳು ಅದ್ಭುತ’ ಎಂದರು.</p>.<p>ಮುಖಂಡರಾದ ರಾಜಣ್ಣ ವಿರಕ್ತಮಠ, ಸಂಗಪ್ಪ ಕಂಕಣವಾಡ, ಪವನ ಹಾವೇರಿ, ಮಂಜುನಾಥ ಮಳ್ಳೂರು, ಈರಣ್ಣ ಅಂಕಲಕೋಟಿ, ಬಸವರಾಜ ಹಿರೇಮಠ, ರಮೇಶ ಹೊಟ್ಟುರ, ಸುರೇಶ ಹೊಟ್ಟುರ, ಮಾಲತೇಶ ಯಲಿವಿಗಿ, ಲಕ್ಷ್ಮಣ ಕಬನೂರ, ರಮೇಶ ವನಹಳ್ಳಿ, ಮುರಿಗೆಪ್ಪ ಕಾರಡಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>