ಚಿಂಚಣಿಯ ಅಲ್ಲಮಪ್ರಭು ಸ್ವಾಮಿಜಿ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಶಾಲೆಗಳ ಸ್ಥಿತಿ ಸುಧಾರಿಸಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಅಗತ್ಯವಾಗಿದೆ ಎಂದರು. ಸಮಾವೇಶದಲ್ಲಿ ಕನ್ನಡ ಹೋರಾಟಗಾರ ಬಿ.ಆರ್.ಪಾಟೀಲ, ಎಂ.ಡಿ.ಅಲಾಸೆ, ಸಂಜಯ ಪಾಟೀಲ, ಸಂಜೀವ ಬಡಿಗೇರ, ಕಸ್ತೂರಿ ಭಾವಿ, ರವೀಂದ್ರ ತೋಟಗೇರ, ಬಸವರಾಜ ಖಾನಪ್ಪನವರ, ಅನೀಲ ನೇಷ್ಠಿ, ಎಸ್.ಎಲ್. ಕಾಮನೆ ಅವರನ್ನು ಸನ್ಮಾನಿಸಲಾಯಿತು.