ರಟ್ಟೀಹಳ್ಳಿ ತಾಲ್ಲೂಕು ಜೋಕನಾಳ ಗ್ರಾಮದ ಐತಿಹಾಸಿಕ ಭಗವತಿ ಕೆರೆ ಬಿರುಬೇಸಿಗೆಯಲ್ಲಿಯೂ ಸಮೃದ್ಧ ನೀರಿನಿಂದ ತುಂಬಿರುವುದು
ಒಡ್ಡು ಹಾಕುವುದು ಅಗತ್ಯ
‘ಭಗವತಿಯ ಕೆರೆಯ ವಿಸ್ತೀರ್ಣ ಅಂದಾಜು 38-40 ಎಕರೆ ಪ್ರದೇಶವಿದ್ದು ನೀರಾವರಿ ಅಧಿಕಾರಿಗಳು ಸರ್ವೆ ಮಾಡಿ ಹದ್ದನ್ನು ಗುರುತಿಸಿ ಒಡ್ಡುಹಾಕಬೇಕಿದೆ. ಕೆರೆಯ ನೀರು ಸಂಗ್ರಹದಿಂದ ತಾಲ್ಲೂಕಿನ ಕಣವಿಶಿದ್ದಗೇರಿ ಜೋಕನಾಳ ಕಬ್ಬಾರ ಹಳಿಯಾಳ ತಡಕನಹಳ್ಳಿ ಕಡೂರ ಪರ್ವತಶಿದ್ದಗೇರಿ ಗ್ರಾಮಗಳಿಗೆ ಕೆರೆಯಿಂದ ನೀರು ಪೂರೈಸಬಹುದಾಗಿದೆ. ತುಂಗಭದ್ರಾ ನದಿಯಿಂದ ಪೈಪ್ಲೈಮ್ಗಳ ಮೂಲಕ ಕೆರೆಗೆ ನೀರು ತುಂಬಿಸಿದರೆ ಬರಗಾಲದಲ್ಲಿ ರೈತರು ಬೆಳೆ ಬೆಳೆದುಕೊಳ್ಳಲು ಹಾಗೂ ದನಕರುಗಳಿಗೆ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ಅಲ್ಲದೇ ಈ ಜಾಗವನ್ನು ಪ್ರವಾಸಿತಾಣವನ್ನಾಗಿ ಮಾಡಬಹುದು’ ಎನ್ನುತ್ತಾರೆ ಜೋಕನಾಳ ಗ್ರಾಮದ ಭಗವತಿ ಕೆರೆ ಹೋರಾಟ ಸಮಿತಿಯ ಅಧ್ಯಕ್ಷ ಫಕ್ಕೀರಪ್ಪ ತಮ್ಮಣ್ಣನವರ.