‘ಚಂಪಾ ಅವರು ಹೊಸರಿತ್ತಿಯಲ್ಲಿ ನಡೆದ ಹಾವೇರಿ ಜಿಲ್ಲಾ ಮಟ್ಟದ 3ನೇಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ತಮ್ಮ ಗುರುಗಳಾದ ವಿದ್ಯಾನಗರ ಪಶ್ಚಿಮ ಬಡಾವಣೆಯಲ್ಲಿರುವ ಎಂ.ಬಿ.ಹಿರೇಮಠ ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು.ಹಾವೇರಿ ನಗರಕ್ಕೆ ಬಂದಾಗಲೆಲ್ಲ ಬಸವೇಶ್ವರ ನಗರದ ನರಗುಂದ ಖಾನಾವಳಿಗೆ ಭೇಟಿ ನೀಡಿ, ರೊಟ್ಟಿ, ಬದನೆಕಾಯಿ ಪಲ್ಯ ಸವಿಯುತ್ತಿದ್ದರು’ ಎಂದು ಅವರ ಒಡನಾಡಿ ಮಾಲತೇಶ ಅಂಗೂರ ನೆನಪು ಮಾಡಿಕೊಂಡರು.