ರಾಣೆಬೆನ್ನೂರು: ಇಲ್ಲಿನ ಮೇಡ್ಲೇರಿ ರಸ್ತೆಯ ಬಳಿ ಇರುವ ಭಾವೈಕ್ಯತೆದೇವಿ ಎಂದೇ ಪ್ರಸಿದ್ದಿ ಪಡೆದಿರುವ ಗಂಗಾಜಲ ಚೌಡೇಶ್ವರಿ ದೇವಿಗೆ ಗುರುವಾರ ವೈಶಾಖ ಮಾಸದ ಪ್ರಯುಕ್ತ ಅಭಿಷೇಕ ಮತ್ತು 1 ಲಕ್ಷ ಬಿಲ್ವಾರ್ಚನೆ ಮಹಾಪೂಜೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಅರ್ಚಕ ಸೋಮಯ್ಯಸ್ವಾಮಿ ಹಾಗೂ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ನಾಯಕ, ನಾರಾಯಣಪ್ಪ ಬಿಷ್ಟಣ್ಣನವರ, ಶಶಿಧರ ಬಸೆನಾಯಕ, ಲಕ್ಷಣ ಚಿಂತಾ, ಅಣ್ಣೇಶ ಅಟವಾಳಗಿ, ಬಸವರಾಜ ಕಡೇಮನಿ, ನಾಗಪ್ಪ ಕೆಂಪಹನುಮಣ್ಣನವರ, ಪ್ರಶಾಂತ ಅಣಜೇರ ಭಾಗವಹಿಸಿದ್ದರು.
ಗೀತಾ ಮಂಜುನಾಥ ಗಡಾದ ಕುಟುಂಬದರು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.