ಹಾವೇರಿ: ನವದೆಹಲಿ ಎನ್ಸಿಪಿಸಿಆರ್, ಪ್ಯಾನ್-ಭಾರತದ ಪಾರುಗಾಣಿಕಾ ಮತ್ತು ಮಕ್ಕಳ ಮತ್ತು ಹದಿಹರೆಯದವರ ಪುನರ್ವಸತಿ ಜಾಗೃತಿ ಅಭಿಯಾನ ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆ ಹಾಗೂ ಪುರ್ನವಸತಿ ಕುರಿತು ಸೋಮವಾರ ಜಿಲ್ಲೆಯ ಸವಣೂರ ತಾಲ್ಲೂಕಿನ ವಿವಿಧ ಉದ್ದಿಮೆಗಳಿಗೆ ಭೇಟಿ ನೀಡಿ, ಬಾಲಕಾರ್ಮಿಕರ ತಪಾಸಣೆ ಕೈಗೊಳ್ಳಲಾಯಿತು.
ತಪಾಸಣೆ ಸಂದರ್ಭದಲ್ಲಿ ಯಾವುದೇ ಬಾಲ ಹಾಗೂ ಕಿಶೋರ ಕಾರ್ಮಿಕರು ಪತ್ತೆಯಾಗಿರುವುದಿಲ್ಲ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯ್ದೆಯ ಬಗ್ಗೆ ಎಲ್ಲಾ ಮಾಲೀಕರಿಗೆ ಜಾಗೃತಿ ಮೂಡಿಸಲಾಯಿತು.
ಸವಣೂರು ಕಾರ್ಮಿಕ ನಿರೀಕ್ಷಕಿ ಅನುರಾಧಾ ಕಾಕತ್ಕರ್, ಪೊಲೀಸ್ ಇಲಾಖೆ, ರೇಷ್ಮೆ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಮಕ್ಕಳ ಸಹಾಯವಾಣಿ 1098 ಸಿಬ್ಬಂದಿ ತಪಾಸಣೆಯಲ್ಲಿ ಹಾಜರಾಗಿದ್ದರು.