ಹಾವೇರಿ: ‘ಕಾಂಗ್ರೆಸ್ನವರಿಗೆಯಾವಾಗಲೂ ಮಹಮದ್ ಅಲಿ ಜಿನ್ನಾನೇ ಕನಸಲ್ಲಿ ಕಾಣೋದು. ಕಾಂಗ್ರೆಸ್ನವರು ಈ ದೇಶವನ್ನು ಒಡೆದೇ ಆಡಳಿತಕ್ಕೆ ಬಂದವರು.ಆ ರೀತಿ ಹೇಳಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಮಹಮದ್ ಅಲಿ ಜಿನ್ನಾ ಹಾಗೂ ಸಾವರ್ಕರ್ ಇಬ್ಬರೂ ಒಂದೇ ಎಂಬ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ರಾಣೆಬೆನ್ನೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ,ಕಾಂಗ್ರೆಸ್ನವರಿಗೆ ಜಿನ್ನಾ ಮೇಲೆ ಬಹಳ ಪ್ರೀತಿ.ಹೀಗಾಗಿ ಅವರ ಹೇಳಿಕೆ ಬಗ್ಗೆ ವಿಶ್ಲೇಷಣೆ ಮಾಡೋ ಅಗತ್ಯ ಇಲ್ಲ ಎಂದರು.
ಸರ್ಕಾರದ ಮೇಲೆ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿ,ಇದು ರಾಜಕೀಯ ಪ್ರೇರಿತವಾದಂತ ಆರೋಪ. ಗುತ್ತಿಗೆದಾರರ ಬಳಿ ಸಾಕ್ಷಿ ಆಧಾರಗಳಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ.ತನಿಖೆ ಆಗಲಿ, ಸತ್ಯ ಹೊರಬರಲಿ ಎಂದರು.