ಆಕಳನ್ನು ರಮಿಸಿ ಹಾಲು ಪಡೆಯಬೇಕೇ ಹೊರತು, ಬೆದರಿಸಿದರೆ ಪ್ರಯೋಜನವಾಗುವುದಿಲ್ಲ. ಯಾರೇ ತಂಬಿಗೆ ತಂದರೂ ಹಾಲು ಕೊಡುವ ಆಕಳು ಇದ್ದ ಹಾಗೆ ಯಡಿಯೂರಪ್ಪ. ಯಾವುದೇ ಗಾಳಿ, ಬಿರುಗಾಳಿ ಬೀಸಿದರೂ ‘ಗುಡ್ಡ’ ಅಲುಗಾಡುವುದಿಲ್ಲ. ಅದೇ ರೀತಿ ಗುಡ್ಡದ ಹಾಗೆ ಯಡಿಯೂರಪ್ಪ ಗಟ್ಟಿಯಾಗಿರಬೇಕು. ಯಾವ ಭಯವೂ ಇಲ್ಲದೆ ನಿಮ್ಮದೇ ವಿವೇಚನೆಯಲ್ಲಿ ರಾಜ್ಯವನ್ನು ಮುನ್ನಡೆಸಿ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದರು.