ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಡಾ.ಮಹೇಶ ಕಡಗಿ ಮಾತನಾಡಿದರು, ಉಪನಿರ್ದೇಶಕ ಡಾ.ಗೋಪಿನಾಥ, ಸಹಾಯಕ ನಿರ್ದೇಶಕ ಡಾ.ಪರಮೇಶ ಎನ್. ಹುಬ್ಬಳ್ಳಿ ಮಾತನಾಡಿದರು. ಜಾನುವಾರು ಪ್ರದರ್ಶನದಲ್ಲಿ ಹರಳಹಳ್ಳಿ ಗ್ರಾಮದ ರೈತರ 50ಕ್ಕೂ ಹೆಚ್ಚು ಜಾನುವಾರುಗಳು ಪಾಲ್ಗೊಂಡಿದ್ದವು. ಪಾಲಿ ಕ್ಲಿನಿಕ್ನ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಬಿ ಸಣ್ಣಕ್ಕಿ ಬಹುಮಾನ ವಿತರಣೆಯಲ್ಲಿ ತೆಗೆದುಕೊಳ್ಳುವ ಮಾನದಂಡಗಳನ್ನು ರೈತರಿಗೆ ತಿಳಿಸಿ ಬಹುಮಾನ ವಿತರಣೆ ಮಾಡಿದರು.