‘ಸಂಘಕ್ಕೆ ಕೇವಲ 340 ಚೀಲ ಯೂರಿಯಾ ಗೊಬ್ಬರ ಬಂದಿತ್ತು. ಅದರಲ್ಲೇ ಅಷ್ಟು ಜನರಿಗೆ ಹಂಚುವುದು ಕಷ್ಟ. ಹೀಗಾಗಿ ಒಬ್ಬರಿಗೆ 5 ಚೀಲದಂತೆ ಕೃಷಿ ಪತ್ತಿನ ಸಹಕಾರಿ ಗೊಬ್ಬರ ವಿತರಣೆ ಮಾಡಲಾಯಿತು. ಕೊನೆ ಗಳಿಗೆಯಲ್ಲಿ ಸರದಿಯಲ್ಲಿ ನಿಂತವರಿಗೆ ಮತ್ತೆ ಯೂರಿಯಾ ಗೊಬ್ಬರ ಬಂದ ನಂತರ ವಿತರಿಸುವ ಭರವಸೆ ನೀಡಲಾಗಿದೆ’ ಎಂದು ಕೃಷಿ ಪತ್ತಿನ ಸಹಕಾರಸಂಘದಕಾರ್ಯದರ್ಶಿ ಪರಸಪ್ಪ ಉಂಡಿ ತಿಳಿಸಿದರು.