ವಿದ್ಯುತ್ ವಲಯ ಖಾಸಗೀಕರಣದಿಂದ ರೈತರ ಪಂಪ್ಸೆಟ್ಗಳಿಗೆ ಮೀಟರ್ ಹಾಕಿ, ಬಿಲ್ ವಸೂಲಿ ಮಾಡುವ ಹುನ್ನಾರವಿದೆ. ಇದರಿಂದ ರೈತರು ಕೃಷಿಯಿಂದ ವಿಮುಖರಾಗಿ, ಖಾಸಗಿಯವರ ಒಡೆತನದಲ್ಲಿ ಸಿಲುಕುತ್ತಾರೆ. ದೇಶದ ಜನರಿಗೆ ಅನ್ನ ನೀಡುವ ರೈತ ಬೀದಿಗೆ ಬೀಳಲಿದ್ದಾನೆ. ಪ್ರಗತಿಪರ ಚಿಂತಕರು, ರೈತ ಮುಖಂಡರು, ಬುದ್ಧಿಜೀವಿಗಳ ಜತೆ ಚರ್ಚಿಸಿ ಮಸೂದೆಯನ್ನು ಜಾರಿಗೆ ತರದೆ, ತರಾತುರಿಯಲ್ಲಿ ಕೇಂದ್ರ ಜಾರಿಗೊಳಿಸಲು ಹೊರಟಿದೆ ಎಂದು ಟೀಕಿಸಿದರು.