<p><strong>ಹಾವೇರಿ:</strong> ಜಿಲ್ಲೆಯ ರಟ್ಟೀಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ನಲ್ಲಿದ್ದ ವೈದ್ಯಕೀಯ ಉಪಕರಣಗಳನ್ನು ಕಳವು ಮಾಡಿದ್ದ ಆರೋಪದಡಿ ಬಸವರಾಜ ನಾಗಪ್ಪ ಹೂಲಿಹಳ್ಳಿ (36) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ಬಸವರಾಜ, ರಾಣೆಬೆನ್ನೂರಿನಲ್ಲಿ ನೆಲೆಸಿದ್ದ. ಈ ಹಿಂದೆ, 108 ಆಂಬುಲೆನ್ಸ್ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆಯಷ್ಟೇ ಈತನನ್ನು ಕೆಲಸದಿಂದ ತೆಗೆಯಲಾಗಿತ್ತು. ಹೊಸ ಆಂಬುಲೆನ್ಸ್ ಮಾಡುವ ಉದ್ದೇಶದಿಂದ ಆತ, ಕಳ್ಳತನ ಮಾಡಿದ್ದನೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ರಟ್ಟೀಹಳ್ಳಿ ಪೊಲೀಸರು ಹೇಳಿದರು.</p>.<p>‘ಆಂಬುಲೆನ್ಸ್ ವಾಹನಗಳಲ್ಲಿರುವ ವಸ್ತುಗಳಿಗೆ ಹೆಚ್ಚಿನ ಬೆಲೆ ಇರುವ ಸಂಗತಿ ಆರೋಪಿಗೆ ಗೊತ್ತಿತ್ತು. ಅದೇ ಕಾರಣಕ್ಕೆ ಆತ, ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ನಲ್ಲಿದ್ದ ₹ 2.58 ಲಕ್ಷ ಮೌಲ್ಯದ ಮಾನಿಟರ್, ವೆಂಟಿಲೇಟರ್ ಹಾಗೂ ಸಿರಿಂಜ್ ಪಂಪ್ ಕಳ್ಳತನ ಮಾಡಿದ್ದ. ಈ ವಸ್ತುಗಳನ್ನು ಗಂಗಾವತಿಯಲ್ಲಿ ಮಾರಾಟ ಮಾಡಿದ್ದ. ಈತನನ್ನು ಬಂಧನ ಮಾಡುತ್ತಿದ್ದಂತೆ, ವೈದ್ಯಕೀಯ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.</p>.<p><strong>ಮತ್ತೆರೆಡು ಕಡೆ ಕಳವು:</strong> ‘ಆರೋಪಿ ಬಸವರಾಜ, ಕುಪ್ಪೇಲೂರು ಹಾಗೂ ಹಾವೇರಿ ಜಿಲ್ಲಾಸ್ಪತ್ರೆ ಎದುರು ನಿಲ್ಲಿಸಿದ್ದ ಆಂಬುಲೆನ್ಸ್ ವಾಹನಗಳಲ್ಲಿಯೂ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಕೃತ್ಯದಿಂದ ಬಂದ ಹಣದಲ್ಲಿ ಆರೋಪಿ, ಹೊಸ ಆಂಬುಲೆನ್ಸ್ ಖರೀದಿಸಿ ಸ್ವಂತ ವಾಹನದ ಚಾಲಕನಾಗಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ನಲ್ಲಿ ಜ. 28ರಿಂದ ಜ. 30ರವರೆಗಿನ ಅವಧಿಯಲ್ಲಿ ಕಳವು ಮಾಡಿದ್ದ ಆರೋಪಿ, ₹ 1.50 ಲಕ್ಷ ಮೌಲ್ಯದ ವೆಂಟಿಲೇಟರ್, ₹ 75 ಸಾವಿರ ಮೌಲ್ಯದ ಮಾನಿಟರ್ ಹಾಗೂ ₹ 25 ಸಾವಿರ ಮೌಲ್ಯದ ಸಿರಿಂಜ್ ಪಂಪ್ ಕೊಂಡೊಯ್ದಿದ್ದ.. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದರು.</p>.<p>‘ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಲ್ಲಿಸಿದ್ದ 108 ಆಂಬುಲೆನ್ಸ್ ವಾಹನದ ಗಾಜು ಒಡೆದು, ₹ 35 ಸಾವಿರ ಮೌಲ್ಯದ ಪಲ್ಸ್ ಮಾನಿಟರ್, ₹ 50 ಸಾವಿರ ಮೌಲ್ಯದ ವೆಂಟಿಲೇಟರ್, ₹15 ಸಾವಿರ ಮೌಲ್ಯದ ಸಿರಿಂಜ್ ಪಂಪ್ ಉಪಕರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆಯೂ ಹಲಗೇರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು’ ಎಂದರು.</p>
<p><strong>ಹಾವೇರಿ:</strong> ಜಿಲ್ಲೆಯ ರಟ್ಟೀಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ನಲ್ಲಿದ್ದ ವೈದ್ಯಕೀಯ ಉಪಕರಣಗಳನ್ನು ಕಳವು ಮಾಡಿದ್ದ ಆರೋಪದಡಿ ಬಸವರಾಜ ನಾಗಪ್ಪ ಹೂಲಿಹಳ್ಳಿ (36) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ಬಸವರಾಜ, ರಾಣೆಬೆನ್ನೂರಿನಲ್ಲಿ ನೆಲೆಸಿದ್ದ. ಈ ಹಿಂದೆ, 108 ಆಂಬುಲೆನ್ಸ್ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆಯಷ್ಟೇ ಈತನನ್ನು ಕೆಲಸದಿಂದ ತೆಗೆಯಲಾಗಿತ್ತು. ಹೊಸ ಆಂಬುಲೆನ್ಸ್ ಮಾಡುವ ಉದ್ದೇಶದಿಂದ ಆತ, ಕಳ್ಳತನ ಮಾಡಿದ್ದನೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ರಟ್ಟೀಹಳ್ಳಿ ಪೊಲೀಸರು ಹೇಳಿದರು.</p>.<p>‘ಆಂಬುಲೆನ್ಸ್ ವಾಹನಗಳಲ್ಲಿರುವ ವಸ್ತುಗಳಿಗೆ ಹೆಚ್ಚಿನ ಬೆಲೆ ಇರುವ ಸಂಗತಿ ಆರೋಪಿಗೆ ಗೊತ್ತಿತ್ತು. ಅದೇ ಕಾರಣಕ್ಕೆ ಆತ, ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ನಲ್ಲಿದ್ದ ₹ 2.58 ಲಕ್ಷ ಮೌಲ್ಯದ ಮಾನಿಟರ್, ವೆಂಟಿಲೇಟರ್ ಹಾಗೂ ಸಿರಿಂಜ್ ಪಂಪ್ ಕಳ್ಳತನ ಮಾಡಿದ್ದ. ಈ ವಸ್ತುಗಳನ್ನು ಗಂಗಾವತಿಯಲ್ಲಿ ಮಾರಾಟ ಮಾಡಿದ್ದ. ಈತನನ್ನು ಬಂಧನ ಮಾಡುತ್ತಿದ್ದಂತೆ, ವೈದ್ಯಕೀಯ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.</p>.<p><strong>ಮತ್ತೆರೆಡು ಕಡೆ ಕಳವು:</strong> ‘ಆರೋಪಿ ಬಸವರಾಜ, ಕುಪ್ಪೇಲೂರು ಹಾಗೂ ಹಾವೇರಿ ಜಿಲ್ಲಾಸ್ಪತ್ರೆ ಎದುರು ನಿಲ್ಲಿಸಿದ್ದ ಆಂಬುಲೆನ್ಸ್ ವಾಹನಗಳಲ್ಲಿಯೂ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಕೃತ್ಯದಿಂದ ಬಂದ ಹಣದಲ್ಲಿ ಆರೋಪಿ, ಹೊಸ ಆಂಬುಲೆನ್ಸ್ ಖರೀದಿಸಿ ಸ್ವಂತ ವಾಹನದ ಚಾಲಕನಾಗಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.</p>.<p>‘ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ನಲ್ಲಿ ಜ. 28ರಿಂದ ಜ. 30ರವರೆಗಿನ ಅವಧಿಯಲ್ಲಿ ಕಳವು ಮಾಡಿದ್ದ ಆರೋಪಿ, ₹ 1.50 ಲಕ್ಷ ಮೌಲ್ಯದ ವೆಂಟಿಲೇಟರ್, ₹ 75 ಸಾವಿರ ಮೌಲ್ಯದ ಮಾನಿಟರ್ ಹಾಗೂ ₹ 25 ಸಾವಿರ ಮೌಲ್ಯದ ಸಿರಿಂಜ್ ಪಂಪ್ ಕೊಂಡೊಯ್ದಿದ್ದ.. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದರು.</p>.<p>‘ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಲ್ಲಿಸಿದ್ದ 108 ಆಂಬುಲೆನ್ಸ್ ವಾಹನದ ಗಾಜು ಒಡೆದು, ₹ 35 ಸಾವಿರ ಮೌಲ್ಯದ ಪಲ್ಸ್ ಮಾನಿಟರ್, ₹ 50 ಸಾವಿರ ಮೌಲ್ಯದ ವೆಂಟಿಲೇಟರ್, ₹15 ಸಾವಿರ ಮೌಲ್ಯದ ಸಿರಿಂಜ್ ಪಂಪ್ ಉಪಕರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆಯೂ ಹಲಗೇರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು’ ಎಂದರು.</p>