<p><strong>ಹಾವೇರಿ:</strong> ‘ಕಷ್ಟವೆಂದು ಹೇಳಿಕೊಂಡು ನಮ್ಮ ಬಳಿ ಬರುವವರಿಗೆ ಸಹಾಯ ಮಾಡಿದರೆ, ಅದು ದೇವರ ಸೇವೆಯಾಗುತ್ತದೆ. ಪರಿಶುದ್ಧವಾದ ಭಕ್ತಿ ಹಾಗೂ ಸೇವೆಯಿಂದ ದೇವರನ್ನು ಆರಾಧಿಸಿದರೆ, ದೇವರು ಒಲಿಯುತ್ತಾನೆ’ ಎಂದು ಹೂವಿನಹಡಗಲಿಯ ಕೆಜಿಪಿಎಲ್ಎಫ್ ಅಧ್ಯಕ್ಷ ಪಾಸ್ಟರ್ ಪ್ರಕಾಶ ನಾಯ್ಕ ಹೇಳಿದರು.</p>.<p>ನಗರದ ಕಾಗಿನೆಲೆ ರಸ್ತೆಯಲ್ಲಿರುವ ಬೇತೇಲ್ ಚರ್ಚ್ನಲ್ಲಿ ‘ಹಾವೇರಿ ಜಿಲ್ಲಾ ಸಭಾ ಪಾಲಕರ (ಪಾಸ್ಟರ್ಸ್) ಸಮಿತಿ’ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಪಾಸ್ಟರ್ಸ್ ಕುಟುಂಬದವರ ಕ್ರಿಸ್ಮಸ್ ಸಂಭ್ರಮಾಚರಣೆ– 2025’ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಯೇಸುವಿನ ಮುಂದೆ ಪರಿಶುದ್ಧವಾಗಿ ನಡೆದುಕೊಳ್ಳಬೇಕು. ಹೊರಗಡೆ ಇನ್ನೊಬ್ಬರ ಜೊತೆ ಚೆನ್ನಾಗಿ ಮಾತನಾಡುತ್ತೇವೆ. ಆದರೆ, ಮನಸ್ಸಿನಲ್ಲಿಯೇ ಅವರಿಗೆ ಬೈಯುತ್ತೇವೆ, ಶಪಿಸುತ್ತೇವೆ. ಈ ರೀತಿ ಮತ್ತೊಬ್ಬರನ್ನು ದ್ವೇಷಿಸಬಾರದು. ಎಲ್ಲರಲ್ಲೂ ದೇವರನ್ನು ಕಾಣಬೇಕು. ಮತ್ತೊಬ್ಬರಿಗೆ ಒಳ್ಳೆಯದು ಮಾಡಬೇಕೆಂದು ನಮ್ಮ ಮನೋಭಾವ ಬದಲಾದರೆ, ದೇವರು ನಮ್ಮನ್ನು ಕಾಪಾಡುತ್ತಾನೆ’ ಎಂದು ಹೇಳಿದರು.</p>.<p>‘ನಮ್ಮೆಲ್ಲರ ಜೀವನದಲ್ಲಿ ದೇವರು ಇದ್ದಾರೆ. ಪಾಸ್ಟರ್ಗಳ ರೂಪದಲ್ಲಿ ಭಕ್ತರನ್ನು ಮುಟ್ಟುತ್ತಿದ್ದಾರೆ. ಪಾಸ್ಟರ್ ಬಾರದಿದ್ದರೆ, ನಮಗೆ ದೇವರ ರೂಪ ತಿಳಿಯುತ್ತಿರಲಿಲ್ಲ’ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರುದ್ರಪ್ಪ ಲಮಾಣಿ, ‘ನಮ್ಮ ಸಂವಿಧಾನ, ಸರ್ವರನ್ನೂ ಸಮಾನವಾಗಿ ಕಾಣುತ್ತದೆ. ಯಾವುದೇ ಜಾತಿ, ಮತವೆಂಬ ಬೇಧ– ಭಾವ ಮಾಡಿಲ್ಲ. ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಮನೋಭಾವದಲ್ಲಿ ಬದುಕುತ್ತಿದ್ದೇವೆ’ ಎಂದು ಹೇಳಿದರು.</p>.<p>ಜಿಲ್ಲೆಯ ವಿವಿಧ ಭಾಗದ 50ಕ್ಕೂ ಹೆಚ್ಚು ಪಾಸ್ಟರ್ಗಳು ಹಾಗೂ ಅವರ ಕುಟುಂಬಸ್ಥರು, ಸಮಿತಿ ಅಧ್ಯಕ್ಷ ಕಿರಣ ನಾಯ್ಕ, ಉಪಾಧ್ಯಕ್ಷ ವಾಸುದೇವ, ಕಾರ್ಯದರ್ಶಿ ರಮೇಶ ಜೆ., ಖಜಾಂಚಿ ಶಂಕರ್, ಸದಸ್ಯರಾದ ರಾಜು, ಪ್ರಕಾಶ, ರಮೇಶ ಇದ್ದರು.</p>
<p><strong>ಹಾವೇರಿ:</strong> ‘ಕಷ್ಟವೆಂದು ಹೇಳಿಕೊಂಡು ನಮ್ಮ ಬಳಿ ಬರುವವರಿಗೆ ಸಹಾಯ ಮಾಡಿದರೆ, ಅದು ದೇವರ ಸೇವೆಯಾಗುತ್ತದೆ. ಪರಿಶುದ್ಧವಾದ ಭಕ್ತಿ ಹಾಗೂ ಸೇವೆಯಿಂದ ದೇವರನ್ನು ಆರಾಧಿಸಿದರೆ, ದೇವರು ಒಲಿಯುತ್ತಾನೆ’ ಎಂದು ಹೂವಿನಹಡಗಲಿಯ ಕೆಜಿಪಿಎಲ್ಎಫ್ ಅಧ್ಯಕ್ಷ ಪಾಸ್ಟರ್ ಪ್ರಕಾಶ ನಾಯ್ಕ ಹೇಳಿದರು.</p>.<p>ನಗರದ ಕಾಗಿನೆಲೆ ರಸ್ತೆಯಲ್ಲಿರುವ ಬೇತೇಲ್ ಚರ್ಚ್ನಲ್ಲಿ ‘ಹಾವೇರಿ ಜಿಲ್ಲಾ ಸಭಾ ಪಾಲಕರ (ಪಾಸ್ಟರ್ಸ್) ಸಮಿತಿ’ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಪಾಸ್ಟರ್ಸ್ ಕುಟುಂಬದವರ ಕ್ರಿಸ್ಮಸ್ ಸಂಭ್ರಮಾಚರಣೆ– 2025’ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಯೇಸುವಿನ ಮುಂದೆ ಪರಿಶುದ್ಧವಾಗಿ ನಡೆದುಕೊಳ್ಳಬೇಕು. ಹೊರಗಡೆ ಇನ್ನೊಬ್ಬರ ಜೊತೆ ಚೆನ್ನಾಗಿ ಮಾತನಾಡುತ್ತೇವೆ. ಆದರೆ, ಮನಸ್ಸಿನಲ್ಲಿಯೇ ಅವರಿಗೆ ಬೈಯುತ್ತೇವೆ, ಶಪಿಸುತ್ತೇವೆ. ಈ ರೀತಿ ಮತ್ತೊಬ್ಬರನ್ನು ದ್ವೇಷಿಸಬಾರದು. ಎಲ್ಲರಲ್ಲೂ ದೇವರನ್ನು ಕಾಣಬೇಕು. ಮತ್ತೊಬ್ಬರಿಗೆ ಒಳ್ಳೆಯದು ಮಾಡಬೇಕೆಂದು ನಮ್ಮ ಮನೋಭಾವ ಬದಲಾದರೆ, ದೇವರು ನಮ್ಮನ್ನು ಕಾಪಾಡುತ್ತಾನೆ’ ಎಂದು ಹೇಳಿದರು.</p>.<p>‘ನಮ್ಮೆಲ್ಲರ ಜೀವನದಲ್ಲಿ ದೇವರು ಇದ್ದಾರೆ. ಪಾಸ್ಟರ್ಗಳ ರೂಪದಲ್ಲಿ ಭಕ್ತರನ್ನು ಮುಟ್ಟುತ್ತಿದ್ದಾರೆ. ಪಾಸ್ಟರ್ ಬಾರದಿದ್ದರೆ, ನಮಗೆ ದೇವರ ರೂಪ ತಿಳಿಯುತ್ತಿರಲಿಲ್ಲ’ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರುದ್ರಪ್ಪ ಲಮಾಣಿ, ‘ನಮ್ಮ ಸಂವಿಧಾನ, ಸರ್ವರನ್ನೂ ಸಮಾನವಾಗಿ ಕಾಣುತ್ತದೆ. ಯಾವುದೇ ಜಾತಿ, ಮತವೆಂಬ ಬೇಧ– ಭಾವ ಮಾಡಿಲ್ಲ. ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಮನೋಭಾವದಲ್ಲಿ ಬದುಕುತ್ತಿದ್ದೇವೆ’ ಎಂದು ಹೇಳಿದರು.</p>.<p>ಜಿಲ್ಲೆಯ ವಿವಿಧ ಭಾಗದ 50ಕ್ಕೂ ಹೆಚ್ಚು ಪಾಸ್ಟರ್ಗಳು ಹಾಗೂ ಅವರ ಕುಟುಂಬಸ್ಥರು, ಸಮಿತಿ ಅಧ್ಯಕ್ಷ ಕಿರಣ ನಾಯ್ಕ, ಉಪಾಧ್ಯಕ್ಷ ವಾಸುದೇವ, ಕಾರ್ಯದರ್ಶಿ ರಮೇಶ ಜೆ., ಖಜಾಂಚಿ ಶಂಕರ್, ಸದಸ್ಯರಾದ ರಾಜು, ಪ್ರಕಾಶ, ರಮೇಶ ಇದ್ದರು.</p>