ಅಮೃತ ಯೋಜನೆಯಡಿ ₹10 ಕೋಟಿ ಅನುದಾನ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿದ್ದು ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ
ಬಸವರಾಜ ಶಿವಣ್ಣನವರ ಶಾಸಕ
ಬಸನಕಟ್ಟೆ ಕೆರೆಯ ಹೂಳೆತ್ತಿ ಸುತ್ತಲೂ ತಡೆಗೋಡೆ ನಿರ್ಮಿಸಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ವಿನಯಕುಮಾರ ಹೊಳೆಯಪ್ಪಗೋಳ ಮುಖ್ಯಾಧಿಕಾರಿ ಬ್ಯಾಡಗಿ ಪುರಸಭೆ
ಕೊಳಚೆ ನೀರಿನಿಂದ ದುರ್ವಾಸನೆ
ಬಸನಕಟ್ಟೆ ಕೆರೆಯು ಗಾಂಧಿನಗರ ಸ್ವಾಮಿ ವಿವೇಕಾನಂದ ನಗರ ಇಸ್ಲಾಂಪುರ ಓಣಿ ಶಿವಪುರ ಬಡಾವಣೆ ಇವುಗಳ ಮಧ್ಯದಲ್ಲಿದ್ದು ಅಲ್ಲಿಯ ಜನತೆ ಸೊಳ್ಳೆ ಹಾಗೂ ವಿಷಜಂತುಗಳಿಂದ ರೋಸಿ ಹೋಗಿದ್ದಾರೆ. ಕೆರೆಯ ಒಡಲು ಸೂಕ್ತ ನಿರ್ವಹಣೆಯಿಲ್ಲದೆ ಕೊಳಚೆ ನೀರಿನಿಂದ ತುಂಬಿ ಹೋಗಿದ್ದು ಗಬ್ಬು ವಾಸನೆ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿ ಕುಡಿಯುವ ನೀರು ಸಂಗ್ರಹಕ್ಕೆ ಮುಂದಾಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.