ಏನಿದು ಪ್ರಕರಣ?: ಹಾವೇರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ನಾಲ್ಕು ಹಾಸ್ಟೆಲ್ಗಳ ಕಾಮಗಾರಿಗಳ ಕುರಿತಂತೆ ರಾಣೆಬೆನ್ನೂರಿನ ಕೊಟ್ರೇಶ ಬಸಪ್ಪ ಕುದುರಿಹಾಳು ಎಂಬುವರು ಆರ್ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು, ತಾವು ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲವೆಂಬ ಕಾರಣ ನೀಡಿ ಮಾಹಿತಿ ಕೊಟ್ಟಿರಲಿಲ್ಲ. ಈ ಕುರಿತು ಕೊಟ್ರೇಶ ಅವರು ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.