ಗುರುವಾರ , ಮಾರ್ಚ್ 30, 2023
32 °C
ಮಾಳನಾಯಕನಹಳ್ಳಿಯಲ್ಲಿ ನಡೆದ ಸಾಮಾನ್ಯ ಸಭೆ

ಕ್ರಷರ್, ಕಲ್ಲುಗಣಿಗಾರಿಕೆಗೆ ಅನುಮತಿ ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಳನಾಯಕನಹಳ್ಳಿ (ತುಮ್ಮಿನಕಟ್ಟಿ): ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಹನುಮಂತಪ್ಪ ಅಡವೇರ ಇವರ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿನ ಗ್ರಂಥಾಲಯದಲ್ಲಿ ಗ್ರಾ.ಪಂ ಸದಸ್ಯರ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ 15 ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆಗಳ ಕುರಿತು ಪಿಡಿಒ ದೇವರಾಜ್ ಜಿ. ಮಾಹಿತಿ ನೀಡಿದರು. ಇದಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸುವ ಮೂಲಕ ಆಡಳಿತಾತ್ಮಕ ಅನುಮೋದನೆ ನೀಡಿದರು.

ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಪಿ.ಕೆ ಗರಡಿಮನಿ ಸಾರ್ವಜನಿಕರು ಸಲ್ಲಿಸಿದ್ದ ವಿವಿಧ ಮನವಿ ಅರ್ಜಿಗಳ ಕುರಿತು ಸಭೆಯಲ್ಲಿ ಓದಿ ಹೇಳಿದರು. ಬಡೇಬಸಾಪುರ ಗ್ರಾಮದ ಹುಲ್ಲುಗಾವಲಿನಲ್ಲಿ ಕ್ರಷರ್ ಹಾಗೂ ಕಲ್ಲುಗಣಿಗಾರಿಕೆಯನ್ನು ನಡೆಸಲು ಅನುಮತಿ ನೀಡುವುದು ಸೇರಿದಂತೆ ನಿರಾಕ್ಷೇಪಣಾ ಪತ್ರ ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತು ದೀರ್ಘ ಚರ್ಚೆ ನಡೆಯಿತು. ಗ್ರಾಮಸ್ಥರ ತಕರಾರು ಇರುವುದರಿಂದ ಹಾಗೂ ಗ್ರಾ.ಪಂ ವ್ಯಾಪ್ತಿಯಲ್ಲಿ ಇದೊಂದೇ ಹುಲ್ಲುಗಾವಲು ಇದ್ದು ಜಾನುವಾರುಗಳ ಸಂರಕ್ಷಣೆ ಉದ್ದೇಶದಿಂದ ಅವರಿಗೆ ಯಾವುದೇ ಕಾರಣಕ್ಕೂ ಅನುಮತಿ, ನಿರಾಕ್ಷೇಪಣಾ ಪತ್ರ ನೀಡದಂತೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.

ನಟ ಪುನೀತ್ ರಾಜ್‌ಕುಮಾರ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಗ್ರಾಮ ಪಂಚಾಯ್ತಿ  ಉಪಾಧ್ಯಕ್ಷ ಪರಮೇಶಪ್ಪ ಪಾಳೇದ, ರಂಗನಗೌಡ ಪಾಟೀಲ, ಬಂಧವ್ವ ಕಾಳೇರ, ಭಾಗ್ಯಮ್ಮ ಹನುಮಗೌಡ ಮೂಡಬಾಗಿಲ, ರೇಖಾ ಕೊರಕಲಿ, ಮಹೇಶಪ್ಪ ಶಿರಗೇರಿ, ಅನುರಾಧ ದೇವರಮನಿ, ಶಿದ್ಲಿಂಗಪ್ಪ ಚೊಳೇನಹಳ್ಳಿ, ರಮೇಶ ಹಿರೇಬಿದರಿ, ಜಮೀನಾಬಾನು ಮೊಮ್ಮಣಗೇರಿ, ಕುಬೇರಪ್ಪ ಮಾಸೂರ, ನೇತ್ರಾ ಸಾಲಗೇರಿ, ಹಾಲಮ್ಮ ಪರಸಣ್ಣನವರ, ನಾಗರಾಜ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.