ರೈಲ್ವೆ, ಭಾರತೀಯ ವಿಮಾನಯಾನ ಸಂಸ್ಥೆ, ಸಮುದ್ರ ದಂಡೆ ಮುಂತಾದವುಗಳ ಖಾಸಗೀಕರಣವಾಗುತ್ತಿದೆ. ಸಾರಿಗೆ ಸಂಸ್ಥೆ ಡಿಪೊ, ಕೆಇಬಿ, ಕೆ.ಒ.ಎಫ್, ಕೆ.ಎಂ.ಎಫ್ ಮುಂತಾದ ಕಂಪನಿಗಳು ನಷ್ಟದಲ್ಲಿವೆ ಎಂದು ಬಂಡವಾಳಶಾಹಿಗಳಿಗೆ ಬಿಟ್ಟುಕೊಡುವ ಹುನ್ನಾರ ನಡೆಯುತ್ತಿದೆ. ಕಬ್ಬಿಣದ ಅದಿರಿನ ಗುಡ್ಡಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ.ಹೀಗೆ ಮುಂದುವರಿದರೆ, ದೇಶದ ಅರಣ್ಯ ಸಂಪತ್ತನ್ನು ಖಾಸಗಿಯವರಿಗೆ ಬರೆದು ಕೊಡುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.