ಸಹಾಯಕ ಪ್ರಾಧ್ಯಾಪಕ ಡಾ.ವಿನಯಕುಮಾರ ಎಂ.ಎಂ. ಮಾತನಾಡಿ, ‘ಪಾರ್ಥೇನಿಯಂ ಕಳೆಯು 1950ರ ದಶಕದಲ್ಲಿ ಭಾರತ ದೇಶಕ್ಕೆ ಗೋಧಿ ಆಮದಿನೊಂದಿಗೆ ಮೊದಲು ಪ್ರವೇಶಿಸಿತು. ಈ ಒಂದು ಕಳೆಯು ಬೆಳೆಯುವ ಪ್ರದೇಶ, ಬೀಳು ಭೂಮಿ, ಉಳುಮೆ ಮಾಡದ ಪ್ರದೇಶ, ರಸ್ತೆ ಬದಿ, ರೈಲು ದಾರಿ ಪ್ರದೇಶವನ್ನು ಪರಿಗಣನೆಗೆ ತೆಗೆದುಕೊಂಡರೆ ಸುಮಾರು 35 ದಶಲಕ್ಷ ಹೆಕ್ಟೇರ್ ಪ್ರದೇಶವನ್ನು ಆವರಿಸಿಕೊಂಡು ಕಳೆಯಾಗಿ ಕಾಡುತ್ತಿದೆ’ ಎಂದರು.