<p><strong>ಹಾವೇರಿ</strong>: ಮೊಟ್ಟೆ ದರ ಏರಿಕೆ ನೆಪವೊಡ್ಡಿ ಜಿಲ್ಲೆಯ ಹಲವೆಡೆ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮೊಟ್ಟೆ ವಿತರಣೆಯಲ್ಲಿ ಕಡಿತ ಮಾಡಲಾಗಿದೆ. 24 ಮೊಟ್ಟೆಗಳ ಬದಲು 10 ರಿಂದ 15 ಮೊಟ್ಟೆಗಳನ್ನು ಮಾತ್ರ ವಿತರಿಸಲಾಗುತ್ತಿದೆ.</p>.<p>ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ನಿವಾರಿಸಲು ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆ ರೂಪಿಸಿದ್ದು, ಅದರ ಮೂಲಕ ಮೊಟ್ಟೆ ಮತ್ತು ಇತರೆ ದವಸ–ಧಾನ್ಯ ವಿತರಿಸಲಾಗುತ್ತದೆ.</p>.<p>‘ಹಾನಗಲ್ ತಾಲ್ಲೂಕಿನ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಮೇ ತಿಂಗಳಲ್ಲಿ 25 ಮೊಟ್ಟೆ ವಿತರಿಸಲಾಗಿತ್ತು. ಆದರೆ, ಜೂನ್ನಲ್ಲಿ 15 ಮೊಟ್ಟೆ ಮಾತ್ರ ವಿತರಿಸಲಾಗಿದೆ’ ಎಂದು ಜನರು ದೂರುತ್ತಾರೆ.</p>.<p>‘ಒಂದು ಮೊಟ್ಟೆಗೆ ಸರ್ಕಾರ ₹ 5 ನೀಡುತ್ತಿದೆ. ಈಗ ಮೊಟ್ಟೆ ದರ ₹ 7 ಆಗಿದೆ. ಹೆಚ್ಚುವರಿ ಹಣವನ್ನು ಸರ್ಕಾರ ಕೊಡುತ್ತಿಲ್ಲ. ಕಳೆದ ಮೇ ತಿಂಗಳಲ್ಲಿ ಮೊಟ್ಟೆ ದರ ಕಡಿಮೆ ಇತ್ತು. ಒಂದು ಮೊಟ್ಟೆಗೆ ₹ 5 ದರದಲ್ಲಿ ₹ 120 ಕೊಟ್ಟು 24 ಮೊಟ್ಟೆ ಖರೀದಿಸಿ, ವಿತರಿಸಲಾಗಿತ್ತು. ಈ ತಿಂಗಳು ದರ ದುಬಾರಿ ಆಗಿರುವುದರಿಂದ, ಲಭ್ಯವಿರುವ ಹಣದಲ್ಲಿ 15 ಮೊಟ್ಟೆಗಳನ್ನು ಮಾತ್ರ ವಿತರಿಸಲಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.</p>.<p>‘ಮೊಟ್ಟೆಗಳ ಸಂಖ್ಯೆ ಕಡಿಮೆ ಮಾಡುವಂತೆ ಸರ್ಕಾರ‘ಆದೇಶಿಸಿಲ್ಲ. ಆದರೆ, ನಮ್ಮ ಬಳಿ ಲಭ್ಯವಿರುವ ಹಣದಲ್ಲಿ ಎಷ್ಟು ಸಾಧ್ಯವೋ, ಅಷ್ಟು ಮೊಟ್ಟೆ ಮಾತ್ರ ಖರೀದಿಸಿ, ವಿತರಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.</p>.<p>‘ಮಾತೃಪೂರ್ಣ ಯೋಜನೆ ಒಳ್ಳೆಯ ಕಾರ್ಯಕ್ರಮ. ಆದರೆ, ಇದೀಗ ಮೊಟ್ಟೆ ವಿತರಣೆಗೆ ತಕ್ಕಂತೆ ಸರ್ಕಾರ ಹಣ ಕೊಡುತ್ತಿಲ್ಲ ಎಂಬುದು ಬೇಸರದ ಸಂಗತಿ. ಸರ್ಕಾರದ ಈ ನಡೆ ಖಂಡನೀಯ. ದರ ಏರಿಕೆ ನೆಪದಲ್ಲಿ ಕಡಿಮೆ ಮೊಟ್ಟೆ ವಿತರಿಸುವುದು ಸರಿಯಲ್ಲ. ಕೂಡಲೇ ಮೊಟ್ಟೆ ಖರೀದಿಗೆ ಅಗತ್ಯವಿರುವ ಹಣವನ್ನು ಅಂಗನವಾಡಿಗಳಿಗೆ ಬಿಡುಗಡೆ ಮಾಡಬೇಕು’ ಎಂದು ಹಾನಗಲ್ ನಿವಾಸಿ ರತ್ನಮ್ಮ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಮೊಟ್ಟೆ ದರ ಏರಿಕೆ ನೆಪವೊಡ್ಡಿ ಜಿಲ್ಲೆಯ ಹಲವೆಡೆ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮೊಟ್ಟೆ ವಿತರಣೆಯಲ್ಲಿ ಕಡಿತ ಮಾಡಲಾಗಿದೆ. 24 ಮೊಟ್ಟೆಗಳ ಬದಲು 10 ರಿಂದ 15 ಮೊಟ್ಟೆಗಳನ್ನು ಮಾತ್ರ ವಿತರಿಸಲಾಗುತ್ತಿದೆ.</p>.<p>ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ನಿವಾರಿಸಲು ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆ ರೂಪಿಸಿದ್ದು, ಅದರ ಮೂಲಕ ಮೊಟ್ಟೆ ಮತ್ತು ಇತರೆ ದವಸ–ಧಾನ್ಯ ವಿತರಿಸಲಾಗುತ್ತದೆ.</p>.<p>‘ಹಾನಗಲ್ ತಾಲ್ಲೂಕಿನ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಮೇ ತಿಂಗಳಲ್ಲಿ 25 ಮೊಟ್ಟೆ ವಿತರಿಸಲಾಗಿತ್ತು. ಆದರೆ, ಜೂನ್ನಲ್ಲಿ 15 ಮೊಟ್ಟೆ ಮಾತ್ರ ವಿತರಿಸಲಾಗಿದೆ’ ಎಂದು ಜನರು ದೂರುತ್ತಾರೆ.</p>.<p>‘ಒಂದು ಮೊಟ್ಟೆಗೆ ಸರ್ಕಾರ ₹ 5 ನೀಡುತ್ತಿದೆ. ಈಗ ಮೊಟ್ಟೆ ದರ ₹ 7 ಆಗಿದೆ. ಹೆಚ್ಚುವರಿ ಹಣವನ್ನು ಸರ್ಕಾರ ಕೊಡುತ್ತಿಲ್ಲ. ಕಳೆದ ಮೇ ತಿಂಗಳಲ್ಲಿ ಮೊಟ್ಟೆ ದರ ಕಡಿಮೆ ಇತ್ತು. ಒಂದು ಮೊಟ್ಟೆಗೆ ₹ 5 ದರದಲ್ಲಿ ₹ 120 ಕೊಟ್ಟು 24 ಮೊಟ್ಟೆ ಖರೀದಿಸಿ, ವಿತರಿಸಲಾಗಿತ್ತು. ಈ ತಿಂಗಳು ದರ ದುಬಾರಿ ಆಗಿರುವುದರಿಂದ, ಲಭ್ಯವಿರುವ ಹಣದಲ್ಲಿ 15 ಮೊಟ್ಟೆಗಳನ್ನು ಮಾತ್ರ ವಿತರಿಸಲಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.</p>.<p>‘ಮೊಟ್ಟೆಗಳ ಸಂಖ್ಯೆ ಕಡಿಮೆ ಮಾಡುವಂತೆ ಸರ್ಕಾರ‘ಆದೇಶಿಸಿಲ್ಲ. ಆದರೆ, ನಮ್ಮ ಬಳಿ ಲಭ್ಯವಿರುವ ಹಣದಲ್ಲಿ ಎಷ್ಟು ಸಾಧ್ಯವೋ, ಅಷ್ಟು ಮೊಟ್ಟೆ ಮಾತ್ರ ಖರೀದಿಸಿ, ವಿತರಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.</p>.<p>‘ಮಾತೃಪೂರ್ಣ ಯೋಜನೆ ಒಳ್ಳೆಯ ಕಾರ್ಯಕ್ರಮ. ಆದರೆ, ಇದೀಗ ಮೊಟ್ಟೆ ವಿತರಣೆಗೆ ತಕ್ಕಂತೆ ಸರ್ಕಾರ ಹಣ ಕೊಡುತ್ತಿಲ್ಲ ಎಂಬುದು ಬೇಸರದ ಸಂಗತಿ. ಸರ್ಕಾರದ ಈ ನಡೆ ಖಂಡನೀಯ. ದರ ಏರಿಕೆ ನೆಪದಲ್ಲಿ ಕಡಿಮೆ ಮೊಟ್ಟೆ ವಿತರಿಸುವುದು ಸರಿಯಲ್ಲ. ಕೂಡಲೇ ಮೊಟ್ಟೆ ಖರೀದಿಗೆ ಅಗತ್ಯವಿರುವ ಹಣವನ್ನು ಅಂಗನವಾಡಿಗಳಿಗೆ ಬಿಡುಗಡೆ ಮಾಡಬೇಕು’ ಎಂದು ಹಾನಗಲ್ ನಿವಾಸಿ ರತ್ನಮ್ಮ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>