<p><strong>ಹಾವೇರಿ</strong>: ವಿಷಯವಾರು ಅಧ್ಯಯನ, ಪ್ರಶ್ನೆ ಪತ್ರಿಕೆಗಳ ಸ್ವರೂಪ, ಸಮಯ ನಿರ್ವಹಣೆ ಸೇರಿದಂತೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ತಮ್ಮ ಗೊಂದಲಗಳನ್ನು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಬುಧವಾರ ಆಯೋಜಿಸಿದ್ದ ಫೋನ್ಇನ್ ಕಾರ್ಯಕ್ರಮದಲ್ಲಿ ಪರಿಹರಿಸಿಕೊಂಡರು.</p>.<p>ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ವಿಷಯ ತಜ್ಞ ಶಿಕ್ಷಕರು ಉತ್ತರಿಸಿದರು. ಪರೀಕ್ಷೆಗೆ ಸಿದ್ಧತೆ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವುದರಿಂದ ಆಗುವ ಅನುಕೂಲಗಳ ಕುರಿತು ಮಾಹಿತಿ ನೀಡಿದರು. </p>.<p>ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನ ದಂಡಿನ, ‘ಈ ಬಾರಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮೂರು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ಎದುರಿಸಬೇಕಿದೆ. ಇದರಿಂದ ವಾರ್ಷಿಕ ಪರೀಕ್ಷೆಯ ಭಯ ದೂರವಾಗಲಿದೆ. ಮಾದರಿ ಪ್ರಶ್ನೆ, ಉತ್ತರಗಳನ್ನು ಅನುಸರಿಸಿದರೆ ಪರೀಕ್ಷೆ ಬರೆಯುವುದು ಸುಲಭವಾಗಲಿದೆ’ ಎಂದರು. </p>.<p>‘ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಅಂತಿಮ ಪರೀಕ್ಷೆ ಮಾದರಿಯಲ್ಲಿ ಮಾಡಲಾಗುತ್ತದೆ. ಈಗಾಗಲೇ ಎರಡು ಪರೀಕ್ಷೆಗಳು ಮುಗಿದಿವೆ. ಒಂದನೇ ಪರೀಕ್ಷೆಗೆ ಹೋಲಿಸಿದರೆ ಎರಡನೇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯಾಗಿದೆ. ಒಂದು ವಾರದಲ್ಲಿ ಮೂರನೇ ಪರೀಕ್ಷೆ ನಡೆಯಲಿದೆ’ ಎಂದರು.</p>.<p>‘ಈ ಬಾರಿ ಶೇ 95ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದ್ದು, ಇದಕ್ಕೆ ತಕ್ಕಂತೆ ಇಲಾಖೆ ಶ್ರಮ ವಹಿಸುತ್ತಿದೆ. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಸಾಧಾರಣ ಫಲಿತಾಂಶ ಬಂದಿರುವ ಶಾಲೆಗಳಿಗೆ ಅಧಿಕಾರಿಗಳು ಮತ್ತು ವಿಷಯ ತಜ್ಞ ಶಿಕ್ಷಕರು ಆದ್ಯತೆ ನೀಡುತ್ತಿದ್ದಾರೆ. 8 ಸಾವಿರ ಪ್ರಶ್ನೆ ಮತ್ತು ಉತ್ತರಗಳನ್ನು ಇಲಾಖೆ ಬಿಡುಗಡೆ ಮಾಡಿದೆ’ ಎಂದು ತಿಳಿಸಿದರು.</p>.<p>‘ವೆಬ್ ಕಾಸ್ಟಿಂಗ್ ವ್ಯವಸ್ಥೆ ಪರೀಕ್ಷೆ ವ್ಯವಸ್ಥೆಯ ಪರಿಣಾಮ ಬೀರುತ್ತಿದೆ. ನಕಲು ನಿಯಂತ್ರಣಗೊಂಡಿದೆ’ ಎಂದು ಅವರು ಹೇಳಿದರು.</p>.<p>ಪಾಠ ಆಧಾರಿತ ಮೌಲ್ಯಾಂಕನ (ಎಲ್ಬಿಎ) ಪ್ರಶ್ನೆಗಳ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಅನ್ವಯಿಕ ಪ್ರಶ್ನೆಗಳಿಗೆ 20 ಅಂಕಗಳಿದ್ದು, ಇದು ವಿದ್ಯಾರ್ಥಿಗಳಿಗೆ ಅಂಕ ಹೆಚ್ಚಿಸಿಕೊಳ್ಳುವ ಸುಲಭ ಮಾರ್ಗವಾಗಿದೆ ಎಂದರು.</p>.<p>ಡಯಟ್ ಜಿಲ್ಲಾ ಉಪ ನಿರ್ದೇಶಕ ಜೆ.ಎಂ. ಖಾಜಿ ಮಾತನಾಡಿ, ‘ಜಿಲ್ಲೆಯ 111 ಶಾಲೆಗಳನ್ನು ದತ್ತು ಪಡೆದು ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲ ವಿಷಯಗಳಲ್ಲಿ ಅಂಕ ಗಳಿಸುವ ಬಗ್ಗೆ ತಿಳಿಸಿಕೊಡಲಾಗುತ್ತಿದೆ’ ಎಂದು ಹೇಳಿದರು.</p>.<p>ಪರೀಕ್ಷೆ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಓದಿಗೆ ಅನುಕೂಲಕ್ಕಾಗಿ ಸಂಪನ್ಮೂಲ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಪರೀಕ್ಷೆ ಗೊಂದಲ ನಿವಾರಿಸಲು <strong>‘ಪ್ರಜಾವಾಣಿ’</strong> ಪೋನ್ಇನ್ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದೆ ಎಂದರು.</p>.<p><strong>ವಿದ್ಯಾರ್ಥಿಗಳ ಪ್ರಶ್ನೆಗೆ ವಿಷಯ ತಜ್ಞ ಶಿಕ್ಷಕ ಉತ್ತರ ಕೆಳಕಂಡಂತಿದೆ</strong></p>.<p>* ಪಲ್ಲವಿ, ಬೆನಕನಗೊಂಡ: ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ?</p>.<p>–ಓದಿದ್ದನ್ನು ಬರೆಯಬೇಕು. ನಂತರ ಪುಸ್ತಕ ನೋಡಿ ಬರೆದಿದ್ದನ್ನು ಖಚಿತಪಡಿಸಿಕೊಳ್ಳಬೇಕು. ಬಾಯಿಪಾಠ ಬೇಡ. ಬಿಡುವಿನ ವೇಳೆ ಒಂದು ಅಂಕದ ಉತ್ತರ ಸ್ಮರಿಸಿಕೊಳ್ಳಿ. ರಾತ್ರಿ ಮಲಗುವಾಗ ಶಾಂತಚಿತ್ತದಿಂದ ಪಠ್ಯಗಳ ಸ್ಮರಣೆ ಮಾಡಿ.</p>.<p>*ಅಕ್ಷತಾ, ಕಾಟೇನಹಳ್ಳಿ: ಗಣಿತ ವಿಷಯದ ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ?</p>.<p>– ಸೂತ್ರಗಳ ಬಾಯಿಪಾಠ ಜತೆಗೆ ಸೂತ್ರ ಸಿದ್ಧಗೊಂಡ ಮೂಲ ಅರಿತುಕೊಳ್ಳಬೇಕು. ಇದರಿಂದ ಸೂತ್ರ ನೆನಪಿನಲ್ಲಿ ಉಳಿಯುತ್ತದೆ.</p>.<p>* ದಿನೇಶಗೌಡ, ಬನ್ನೂರ: ಎಲ್ಲ ವಿಷಯಗಳಲ್ಲಿ ಶೇ 100ರಷ್ಟು ಅಂಕ ಗಳಿಸಲು ಏನು ಮಾಡಬೇಕು?</p>.<p>– ಶಿಕ್ಷಕರ ಮಾರ್ಗದರ್ಶನ, ವ್ಯವಸ್ಥಿತ ಓದು, ಪ್ರಚಲಿತ ವಿಷಯಗಳ ಮೇಲಿನ ಸಾಮಾನ್ಯ ಜ್ಞಾನ, ಎಲ್ಬಿಎ ಪ್ರಶ್ನೆಗಳನ್ನು ತಿಳಿದುಕೊಳ್ಳುವುದು ಮತ್ತು ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡಿದರೆ ಶೇ 100ರಷ್ಟು ಅಂಕ ಪಡೆಯಲು ಸಾಧ್ಯ.</p>.<p>* ಐಶ್ವರ್ಯ, ಸಂಗೂರ: ಬೆಳಿಗ್ಗೆ ಓದಲು ಕೂತಾಗ ನಿದ್ದೆ ಬರುತ್ತದೆ. ಇದರಿಂದ ಓದಿನಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ</p>.<p>– ಓದಿನ ಜತೆಗೆ ಕೆಲಸ ಸಮಯ ಧ್ಯಾನ, ವ್ಯಾಯಾಮ ಮಾಡಬೇಕು. ಇಷ್ಟವಾದ ವಿಷಯವನ್ನು ಮೊದಲು ಓದಲು ಪ್ರಾರಂಭಿಸಬೇಕು.</p>.<p>* ಮಂಜುನಾಥ, ತಿಮ್ಮಾಪುರ: ಕನ್ನಡ ವಿಷಯದಲ್ಲಿ ನೂರು ಅಂಕ ಪಡೆಯಲು ಏನು ಮಾಡಬೇಕು?</p>.<p>– ಪ್ರಬಂಧ, ವ್ಯಾಕರಣ, ಪಠ್ಯದಲ್ಲಿನ ಎಲ್ಲ ವಿಷಯ ಓದಿಕೊಂಡು ಸಮಯಕ್ಕೆ ಅವಕಾಶ ನೀಡಿ ಸಮರ್ಪಕವಾಗಿ ಬರೆದಾಗ ಸಂಪೂರ್ಣ ಅಂಕ ಸಿಗುತ್ತದೆ.</p>.<p>* ಸುಮಾ, ಕೂಸನೂರ: ಪರೀಕ್ಷೆಗೆ 35 ದಿನಗಳು ಮಾತ್ರ ಬಾಕಿ ಉಳಿದಿವೆ. ತಯಾರಿ ಹೇಗಿರಬೇಕು?</p>.<p>– ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಷ್ಟವಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ಗೊಂದಲ ಪರಿಹರಿಸಿಕೊಳ್ಳಬೇಕು. ಕಳೆದ ವರ್ಷದ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಇಲಾಖೆ ಹೊರತಂದಿದೆ. ಅವುಗಳನ್ನು ಪರಿಶೀಲಿಸಿ.</p>.<p>* ಜ್ಞಾನೇಶ್ವರಿ, ನೆಲೋಗಲ್: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಓದಿದ್ದು ನೆನಪಿಗೆ ಬರುತ್ತಿಲ್ಲ. ಏನು ಮಾಡಬೇಕು?</p>.<p>– ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ಇದರಿಂದ ಪರೀಕ್ಷೆ ಭಯ ದೂರವಾಗುತ್ತದೆ. ಕ್ರಮೇಣ ಓದಿದ್ದು ಎಲ್ಲವೂ ನೆನಪಿಗೆ ಬರುತ್ತದೆ.</p>.<p>* ಅಕ್ಷತಾ, ಬೈಚವಳ್ಳಿ: ಎಲ್ಬಿಎ ಪ್ರಶ್ನೆಗಳನ್ನು ಹೊರತುಪಡಿಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಬೇರೆ ಪ್ರಶ್ನೆಗಳು ಬರುತ್ತಿವೆ. ಇವುಗಳನ್ನು ಹೇಗೆ ಬಿಡಿಸಬೇಕು </p>.<p>– ಎಲ್ಬಿಎ ಮಾದರಿಯಲ್ಲಿ ಪ್ರಶ್ನೆಗಳಿರುತ್ತವೆ. ಆದರೆ, ಕೆಲವು ಬದಲಾವಣೆ ಮಾಡಿರುತ್ತಾರೆ. ಇದು ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನದ ಮೇಲೆ ನಿರ್ಧಾರವಾಗುತ್ತದೆ. ಪ್ರಶ್ನೆಗಳನ್ನು ಸ್ಪಷ್ಟವಾಗಿ ಓದಿಕೊಂಡು, ಉತ್ತರಿಸಬೇಕು</p>.<p>ಫೋನ್ಇನ್ನಲ್ಲಿ ಹಾನಗಲ್ ಬಿಇಒ ಆರ್.ವಿ. ಚಿನ್ನಿಕಟ್ಟಿ, ಬ್ಯಾಡಗಿ ಬಿಇಒ ಸುರೇಶಬಾಬು ಕೋಟಿ, ಹಾವೇರಿ ಬಿಇಒ ಎಂ.ಎಚ್. ಪಾಟೀಲ, ಹಿರೇಕೆರೂರ ಬಿಇಒ ಶ್ರೀಧರ ಎನ್., ರಾಣೆಬೆನ್ನೂರ ಬಿಇಒ ಶ್ಯಾಮಸುಂದರ ಅಡಿಗ, ಸವಣೂರ ಬಿಇಒ ಎಂ.ಎಫ್. ಬಾರ್ಕಿ, ಶಿಗ್ಗಾವಿ ಬಿಇಒ ಎಂ.ಬಿ. ಅಂಬಿಗೇರ ಪಾಲ್ಗೊಂಡಿದ್ದರು.<br><br></p>.<p><strong>2026 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ </strong></p><p>ಮಾರ್ಚ್ 18; ಪ್ರಥಮ ಭಾಷೆ (ಕನ್ನಡ ಉರ್ದು ಇಂಗ್ಲಿಷ್) ಮಾರ್ಚ್ 23; ವಿಜ್ಞಾನ ಮಾರ್ಚ್ 25; ದ್ವಿತೀಯ ಭಾಷೆ (ಇಂಗ್ಲಿಷ್ ಕನ್ನಡ) ಮಾರ್ಚ್ 28; ಗಣಿತ ಮಾರ್ಚ್ 30; ತೃತೀಯ ಭಾಷೆ (ಹಿಂದಿ ಉರ್ದು ಇಂಗ್ಲಿಷ್) ಏಪ್ರಿಲ್ 02; ಸಮಾಜ ವಿಜ್ಞಾನ</p>.<p><strong>ವಿದ್ಯಾರ್ಥಿಗಳಿಗೆ ಸಲಹೆಗಳು</strong></p><p> * ಸಮಯ ನಿರ್ವಹಣೆಗೆ ಗಮನ ಕೊಡಿ</p><p> * ಅಂಕಗಳಿಗೆ ಅನುಗುಣವಾಗಿ ಉತ್ತರ ಬರೆಯಿರಿ </p><p>* ಅನ್ವಯಿಕ ಪ್ರಶ್ನೆಗಳು 20 ಅಂಕಗಳನ್ನು ಹೊಂದಿದ್ದು ಅವುಗಳತ್ತ ಆಸಕ್ತಿ ವಹಿಸಿ</p><p> * ಒಂದೇ ವಿಷಯದ ಕುರಿತು ಹೆಚ್ಚು ಹೊತ್ತು ಓದುವುದು ಬೇಡ </p><p>* ಓದಿನ ಜತೆಗೆ ಅರ್ಧ ಮುಕ್ಕಾಲು ಗಂಟೆಗೊಮ್ಮೆ ಬಿಡುವು ಪಡೆಯಿರಿ</p><p> * ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ 40 ಪ್ಲಸ್ ಅಳವಡಿಕೆ ಉತ್ತಮವಾಗಿದೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ವಿಷಯವಾರು ಅಧ್ಯಯನ, ಪ್ರಶ್ನೆ ಪತ್ರಿಕೆಗಳ ಸ್ವರೂಪ, ಸಮಯ ನಿರ್ವಹಣೆ ಸೇರಿದಂತೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ತಮ್ಮ ಗೊಂದಲಗಳನ್ನು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಬುಧವಾರ ಆಯೋಜಿಸಿದ್ದ ಫೋನ್ಇನ್ ಕಾರ್ಯಕ್ರಮದಲ್ಲಿ ಪರಿಹರಿಸಿಕೊಂಡರು.</p>.<p>ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ವಿಷಯ ತಜ್ಞ ಶಿಕ್ಷಕರು ಉತ್ತರಿಸಿದರು. ಪರೀಕ್ಷೆಗೆ ಸಿದ್ಧತೆ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವುದರಿಂದ ಆಗುವ ಅನುಕೂಲಗಳ ಕುರಿತು ಮಾಹಿತಿ ನೀಡಿದರು. </p>.<p>ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನ ದಂಡಿನ, ‘ಈ ಬಾರಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮೂರು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ಎದುರಿಸಬೇಕಿದೆ. ಇದರಿಂದ ವಾರ್ಷಿಕ ಪರೀಕ್ಷೆಯ ಭಯ ದೂರವಾಗಲಿದೆ. ಮಾದರಿ ಪ್ರಶ್ನೆ, ಉತ್ತರಗಳನ್ನು ಅನುಸರಿಸಿದರೆ ಪರೀಕ್ಷೆ ಬರೆಯುವುದು ಸುಲಭವಾಗಲಿದೆ’ ಎಂದರು. </p>.<p>‘ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಅಂತಿಮ ಪರೀಕ್ಷೆ ಮಾದರಿಯಲ್ಲಿ ಮಾಡಲಾಗುತ್ತದೆ. ಈಗಾಗಲೇ ಎರಡು ಪರೀಕ್ಷೆಗಳು ಮುಗಿದಿವೆ. ಒಂದನೇ ಪರೀಕ್ಷೆಗೆ ಹೋಲಿಸಿದರೆ ಎರಡನೇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯಾಗಿದೆ. ಒಂದು ವಾರದಲ್ಲಿ ಮೂರನೇ ಪರೀಕ್ಷೆ ನಡೆಯಲಿದೆ’ ಎಂದರು.</p>.<p>‘ಈ ಬಾರಿ ಶೇ 95ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದ್ದು, ಇದಕ್ಕೆ ತಕ್ಕಂತೆ ಇಲಾಖೆ ಶ್ರಮ ವಹಿಸುತ್ತಿದೆ. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಸಾಧಾರಣ ಫಲಿತಾಂಶ ಬಂದಿರುವ ಶಾಲೆಗಳಿಗೆ ಅಧಿಕಾರಿಗಳು ಮತ್ತು ವಿಷಯ ತಜ್ಞ ಶಿಕ್ಷಕರು ಆದ್ಯತೆ ನೀಡುತ್ತಿದ್ದಾರೆ. 8 ಸಾವಿರ ಪ್ರಶ್ನೆ ಮತ್ತು ಉತ್ತರಗಳನ್ನು ಇಲಾಖೆ ಬಿಡುಗಡೆ ಮಾಡಿದೆ’ ಎಂದು ತಿಳಿಸಿದರು.</p>.<p>‘ವೆಬ್ ಕಾಸ್ಟಿಂಗ್ ವ್ಯವಸ್ಥೆ ಪರೀಕ್ಷೆ ವ್ಯವಸ್ಥೆಯ ಪರಿಣಾಮ ಬೀರುತ್ತಿದೆ. ನಕಲು ನಿಯಂತ್ರಣಗೊಂಡಿದೆ’ ಎಂದು ಅವರು ಹೇಳಿದರು.</p>.<p>ಪಾಠ ಆಧಾರಿತ ಮೌಲ್ಯಾಂಕನ (ಎಲ್ಬಿಎ) ಪ್ರಶ್ನೆಗಳ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಅನ್ವಯಿಕ ಪ್ರಶ್ನೆಗಳಿಗೆ 20 ಅಂಕಗಳಿದ್ದು, ಇದು ವಿದ್ಯಾರ್ಥಿಗಳಿಗೆ ಅಂಕ ಹೆಚ್ಚಿಸಿಕೊಳ್ಳುವ ಸುಲಭ ಮಾರ್ಗವಾಗಿದೆ ಎಂದರು.</p>.<p>ಡಯಟ್ ಜಿಲ್ಲಾ ಉಪ ನಿರ್ದೇಶಕ ಜೆ.ಎಂ. ಖಾಜಿ ಮಾತನಾಡಿ, ‘ಜಿಲ್ಲೆಯ 111 ಶಾಲೆಗಳನ್ನು ದತ್ತು ಪಡೆದು ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲ ವಿಷಯಗಳಲ್ಲಿ ಅಂಕ ಗಳಿಸುವ ಬಗ್ಗೆ ತಿಳಿಸಿಕೊಡಲಾಗುತ್ತಿದೆ’ ಎಂದು ಹೇಳಿದರು.</p>.<p>ಪರೀಕ್ಷೆ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಓದಿಗೆ ಅನುಕೂಲಕ್ಕಾಗಿ ಸಂಪನ್ಮೂಲ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಪರೀಕ್ಷೆ ಗೊಂದಲ ನಿವಾರಿಸಲು <strong>‘ಪ್ರಜಾವಾಣಿ’</strong> ಪೋನ್ಇನ್ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದೆ ಎಂದರು.</p>.<p><strong>ವಿದ್ಯಾರ್ಥಿಗಳ ಪ್ರಶ್ನೆಗೆ ವಿಷಯ ತಜ್ಞ ಶಿಕ್ಷಕ ಉತ್ತರ ಕೆಳಕಂಡಂತಿದೆ</strong></p>.<p>* ಪಲ್ಲವಿ, ಬೆನಕನಗೊಂಡ: ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ?</p>.<p>–ಓದಿದ್ದನ್ನು ಬರೆಯಬೇಕು. ನಂತರ ಪುಸ್ತಕ ನೋಡಿ ಬರೆದಿದ್ದನ್ನು ಖಚಿತಪಡಿಸಿಕೊಳ್ಳಬೇಕು. ಬಾಯಿಪಾಠ ಬೇಡ. ಬಿಡುವಿನ ವೇಳೆ ಒಂದು ಅಂಕದ ಉತ್ತರ ಸ್ಮರಿಸಿಕೊಳ್ಳಿ. ರಾತ್ರಿ ಮಲಗುವಾಗ ಶಾಂತಚಿತ್ತದಿಂದ ಪಠ್ಯಗಳ ಸ್ಮರಣೆ ಮಾಡಿ.</p>.<p>*ಅಕ್ಷತಾ, ಕಾಟೇನಹಳ್ಳಿ: ಗಣಿತ ವಿಷಯದ ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ?</p>.<p>– ಸೂತ್ರಗಳ ಬಾಯಿಪಾಠ ಜತೆಗೆ ಸೂತ್ರ ಸಿದ್ಧಗೊಂಡ ಮೂಲ ಅರಿತುಕೊಳ್ಳಬೇಕು. ಇದರಿಂದ ಸೂತ್ರ ನೆನಪಿನಲ್ಲಿ ಉಳಿಯುತ್ತದೆ.</p>.<p>* ದಿನೇಶಗೌಡ, ಬನ್ನೂರ: ಎಲ್ಲ ವಿಷಯಗಳಲ್ಲಿ ಶೇ 100ರಷ್ಟು ಅಂಕ ಗಳಿಸಲು ಏನು ಮಾಡಬೇಕು?</p>.<p>– ಶಿಕ್ಷಕರ ಮಾರ್ಗದರ್ಶನ, ವ್ಯವಸ್ಥಿತ ಓದು, ಪ್ರಚಲಿತ ವಿಷಯಗಳ ಮೇಲಿನ ಸಾಮಾನ್ಯ ಜ್ಞಾನ, ಎಲ್ಬಿಎ ಪ್ರಶ್ನೆಗಳನ್ನು ತಿಳಿದುಕೊಳ್ಳುವುದು ಮತ್ತು ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡಿದರೆ ಶೇ 100ರಷ್ಟು ಅಂಕ ಪಡೆಯಲು ಸಾಧ್ಯ.</p>.<p>* ಐಶ್ವರ್ಯ, ಸಂಗೂರ: ಬೆಳಿಗ್ಗೆ ಓದಲು ಕೂತಾಗ ನಿದ್ದೆ ಬರುತ್ತದೆ. ಇದರಿಂದ ಓದಿನಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ</p>.<p>– ಓದಿನ ಜತೆಗೆ ಕೆಲಸ ಸಮಯ ಧ್ಯಾನ, ವ್ಯಾಯಾಮ ಮಾಡಬೇಕು. ಇಷ್ಟವಾದ ವಿಷಯವನ್ನು ಮೊದಲು ಓದಲು ಪ್ರಾರಂಭಿಸಬೇಕು.</p>.<p>* ಮಂಜುನಾಥ, ತಿಮ್ಮಾಪುರ: ಕನ್ನಡ ವಿಷಯದಲ್ಲಿ ನೂರು ಅಂಕ ಪಡೆಯಲು ಏನು ಮಾಡಬೇಕು?</p>.<p>– ಪ್ರಬಂಧ, ವ್ಯಾಕರಣ, ಪಠ್ಯದಲ್ಲಿನ ಎಲ್ಲ ವಿಷಯ ಓದಿಕೊಂಡು ಸಮಯಕ್ಕೆ ಅವಕಾಶ ನೀಡಿ ಸಮರ್ಪಕವಾಗಿ ಬರೆದಾಗ ಸಂಪೂರ್ಣ ಅಂಕ ಸಿಗುತ್ತದೆ.</p>.<p>* ಸುಮಾ, ಕೂಸನೂರ: ಪರೀಕ್ಷೆಗೆ 35 ದಿನಗಳು ಮಾತ್ರ ಬಾಕಿ ಉಳಿದಿವೆ. ತಯಾರಿ ಹೇಗಿರಬೇಕು?</p>.<p>– ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಷ್ಟವಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ಗೊಂದಲ ಪರಿಹರಿಸಿಕೊಳ್ಳಬೇಕು. ಕಳೆದ ವರ್ಷದ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಇಲಾಖೆ ಹೊರತಂದಿದೆ. ಅವುಗಳನ್ನು ಪರಿಶೀಲಿಸಿ.</p>.<p>* ಜ್ಞಾನೇಶ್ವರಿ, ನೆಲೋಗಲ್: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಓದಿದ್ದು ನೆನಪಿಗೆ ಬರುತ್ತಿಲ್ಲ. ಏನು ಮಾಡಬೇಕು?</p>.<p>– ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ಇದರಿಂದ ಪರೀಕ್ಷೆ ಭಯ ದೂರವಾಗುತ್ತದೆ. ಕ್ರಮೇಣ ಓದಿದ್ದು ಎಲ್ಲವೂ ನೆನಪಿಗೆ ಬರುತ್ತದೆ.</p>.<p>* ಅಕ್ಷತಾ, ಬೈಚವಳ್ಳಿ: ಎಲ್ಬಿಎ ಪ್ರಶ್ನೆಗಳನ್ನು ಹೊರತುಪಡಿಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಬೇರೆ ಪ್ರಶ್ನೆಗಳು ಬರುತ್ತಿವೆ. ಇವುಗಳನ್ನು ಹೇಗೆ ಬಿಡಿಸಬೇಕು </p>.<p>– ಎಲ್ಬಿಎ ಮಾದರಿಯಲ್ಲಿ ಪ್ರಶ್ನೆಗಳಿರುತ್ತವೆ. ಆದರೆ, ಕೆಲವು ಬದಲಾವಣೆ ಮಾಡಿರುತ್ತಾರೆ. ಇದು ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನದ ಮೇಲೆ ನಿರ್ಧಾರವಾಗುತ್ತದೆ. ಪ್ರಶ್ನೆಗಳನ್ನು ಸ್ಪಷ್ಟವಾಗಿ ಓದಿಕೊಂಡು, ಉತ್ತರಿಸಬೇಕು</p>.<p>ಫೋನ್ಇನ್ನಲ್ಲಿ ಹಾನಗಲ್ ಬಿಇಒ ಆರ್.ವಿ. ಚಿನ್ನಿಕಟ್ಟಿ, ಬ್ಯಾಡಗಿ ಬಿಇಒ ಸುರೇಶಬಾಬು ಕೋಟಿ, ಹಾವೇರಿ ಬಿಇಒ ಎಂ.ಎಚ್. ಪಾಟೀಲ, ಹಿರೇಕೆರೂರ ಬಿಇಒ ಶ್ರೀಧರ ಎನ್., ರಾಣೆಬೆನ್ನೂರ ಬಿಇಒ ಶ್ಯಾಮಸುಂದರ ಅಡಿಗ, ಸವಣೂರ ಬಿಇಒ ಎಂ.ಎಫ್. ಬಾರ್ಕಿ, ಶಿಗ್ಗಾವಿ ಬಿಇಒ ಎಂ.ಬಿ. ಅಂಬಿಗೇರ ಪಾಲ್ಗೊಂಡಿದ್ದರು.<br><br></p>.<p><strong>2026 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ </strong></p><p>ಮಾರ್ಚ್ 18; ಪ್ರಥಮ ಭಾಷೆ (ಕನ್ನಡ ಉರ್ದು ಇಂಗ್ಲಿಷ್) ಮಾರ್ಚ್ 23; ವಿಜ್ಞಾನ ಮಾರ್ಚ್ 25; ದ್ವಿತೀಯ ಭಾಷೆ (ಇಂಗ್ಲಿಷ್ ಕನ್ನಡ) ಮಾರ್ಚ್ 28; ಗಣಿತ ಮಾರ್ಚ್ 30; ತೃತೀಯ ಭಾಷೆ (ಹಿಂದಿ ಉರ್ದು ಇಂಗ್ಲಿಷ್) ಏಪ್ರಿಲ್ 02; ಸಮಾಜ ವಿಜ್ಞಾನ</p>.<p><strong>ವಿದ್ಯಾರ್ಥಿಗಳಿಗೆ ಸಲಹೆಗಳು</strong></p><p> * ಸಮಯ ನಿರ್ವಹಣೆಗೆ ಗಮನ ಕೊಡಿ</p><p> * ಅಂಕಗಳಿಗೆ ಅನುಗುಣವಾಗಿ ಉತ್ತರ ಬರೆಯಿರಿ </p><p>* ಅನ್ವಯಿಕ ಪ್ರಶ್ನೆಗಳು 20 ಅಂಕಗಳನ್ನು ಹೊಂದಿದ್ದು ಅವುಗಳತ್ತ ಆಸಕ್ತಿ ವಹಿಸಿ</p><p> * ಒಂದೇ ವಿಷಯದ ಕುರಿತು ಹೆಚ್ಚು ಹೊತ್ತು ಓದುವುದು ಬೇಡ </p><p>* ಓದಿನ ಜತೆಗೆ ಅರ್ಧ ಮುಕ್ಕಾಲು ಗಂಟೆಗೊಮ್ಮೆ ಬಿಡುವು ಪಡೆಯಿರಿ</p><p> * ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ 40 ಪ್ಲಸ್ ಅಳವಡಿಕೆ ಉತ್ತಮವಾಗಿದೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>