<p><strong>ಹಾವೇರಿ:</strong>ನಗರಕ್ಕೆ 1939ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭೇಟಿ ನೀಡಿದ ಸವಿನೆನಪಿಗಾಗಿ ‘ರೆಲ್ಲೋ ಪ್ಲೇಕ್’ ನಾಮಫಲಕವನ್ನು ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಬುಧವಾರ ಅನಾವರಣಗೊಳಿಸಿದರು.</p>.<p>ನಂತರ ಸೂಲಿಬೆಲೆಯವರು ಹುಕ್ಕೇರಿಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸಿದರು. ನಂತರ ಯುವ ಬ್ರಿಗೇಡ್ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಕಾರ್ಯಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸಿದರು.</p>.<p>ರಾಜ್ಯ ಸಂಚಾಲಕ ಕಿರಣ್ ರಾಮು, ಅಭಿಷೇಕ ಉಪ್ಪಿನ, ಪ್ರಮೋದ್ ಮೆಳ್ಳಗಟ್ಟಿ, ಅಕ್ಷಯ ಕಲಾಲ್ ಇತರರು ಇದ್ದರು.</p>.<p class="Subhead"><strong>ಬೋಸ್ ನೆನಪು:</strong></p>.<p>1938ರ ಹರಿಪುರ ಕಾಂಗ್ರೆಸ್ ಅಧಿವೇಶನ ಅಖಿಲ ಭಾರತ ಕಾಂಗ್ರೆಸ್ನ ಅಧ್ಯಕ್ಷತೆಯ ಚುನಾವಣೆಯಲ್ಲಿ ಮಹಾತ್ಮ ಗಾಂಧೀಜಿಯವರ ಅಭ್ಯರ್ಥಿಯಾದ ಪಟ್ಟಾ ಸೀತಾರಾಮಯ್ಯನವರನ್ನು ಸೋಲಿಸಿ, ಸುಭಾಷ್ಚಂದ್ರ ಬೋಸರು ಅಧ್ಯಕ್ಷರಾದರು. ತಮ್ಮ ಗೆಲುವಿಗೆ ಸಹಕರಿಸಿದ ಹಾವೇರಿಯ ಜನತೆ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಭೇಟಿ ನೀಡಿದ್ದರು.</p>.<p>ಹಾವೇರಿ ನಗರದ ತುಂಬಾ ಹಸಿರು ತೋರಣ ಕಟ್ಟಲಾಗಿತ್ತು. ಕರೆಯ ಪಕ್ಕದಲ್ಲಿರುವ ಶಿವಾನಂದ ಥಿಯೇಟರ್ (ಈಗಿನ ದಾನೇಶ್ವರಿ ಕಲಾ ಮಂದಿರ) ಬಳಿ ಇವರ ಬರುವಿಕೆಗಾಗಿ ಜನರು ಕಾಯುತ್ತಿದ್ದರು ಎಂದು ಯುವ ಬ್ರಿಗೇಡ್ ಮುಖಂಡರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong>ನಗರಕ್ಕೆ 1939ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭೇಟಿ ನೀಡಿದ ಸವಿನೆನಪಿಗಾಗಿ ‘ರೆಲ್ಲೋ ಪ್ಲೇಕ್’ ನಾಮಫಲಕವನ್ನು ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಬುಧವಾರ ಅನಾವರಣಗೊಳಿಸಿದರು.</p>.<p>ನಂತರ ಸೂಲಿಬೆಲೆಯವರು ಹುಕ್ಕೇರಿಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸಿದರು. ನಂತರ ಯುವ ಬ್ರಿಗೇಡ್ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಕಾರ್ಯಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸಿದರು.</p>.<p>ರಾಜ್ಯ ಸಂಚಾಲಕ ಕಿರಣ್ ರಾಮು, ಅಭಿಷೇಕ ಉಪ್ಪಿನ, ಪ್ರಮೋದ್ ಮೆಳ್ಳಗಟ್ಟಿ, ಅಕ್ಷಯ ಕಲಾಲ್ ಇತರರು ಇದ್ದರು.</p>.<p class="Subhead"><strong>ಬೋಸ್ ನೆನಪು:</strong></p>.<p>1938ರ ಹರಿಪುರ ಕಾಂಗ್ರೆಸ್ ಅಧಿವೇಶನ ಅಖಿಲ ಭಾರತ ಕಾಂಗ್ರೆಸ್ನ ಅಧ್ಯಕ್ಷತೆಯ ಚುನಾವಣೆಯಲ್ಲಿ ಮಹಾತ್ಮ ಗಾಂಧೀಜಿಯವರ ಅಭ್ಯರ್ಥಿಯಾದ ಪಟ್ಟಾ ಸೀತಾರಾಮಯ್ಯನವರನ್ನು ಸೋಲಿಸಿ, ಸುಭಾಷ್ಚಂದ್ರ ಬೋಸರು ಅಧ್ಯಕ್ಷರಾದರು. ತಮ್ಮ ಗೆಲುವಿಗೆ ಸಹಕರಿಸಿದ ಹಾವೇರಿಯ ಜನತೆ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಭೇಟಿ ನೀಡಿದ್ದರು.</p>.<p>ಹಾವೇರಿ ನಗರದ ತುಂಬಾ ಹಸಿರು ತೋರಣ ಕಟ್ಟಲಾಗಿತ್ತು. ಕರೆಯ ಪಕ್ಕದಲ್ಲಿರುವ ಶಿವಾನಂದ ಥಿಯೇಟರ್ (ಈಗಿನ ದಾನೇಶ್ವರಿ ಕಲಾ ಮಂದಿರ) ಬಳಿ ಇವರ ಬರುವಿಕೆಗಾಗಿ ಜನರು ಕಾಯುತ್ತಿದ್ದರು ಎಂದು ಯುವ ಬ್ರಿಗೇಡ್ ಮುಖಂಡರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>