‘ಈ ಸ್ಥಳದಲ್ಲಿ ಮೊದಲಿನಿಂದಲೂ ಧ್ವಜದ ಕಟ್ಟೆ ಇತ್ತು. ರಸ್ತೆ ಕಾಮಗಾರಿ ಸಂದರ್ಭ ಸ್ವಲ್ಪ ಹಾಳಾಗಿತ್ತು. ನಂತರ ಗ್ರಾಮಸ್ಥರು ಕಟ್ಟೆಯನ್ನು ಮರುನಿರ್ಮಿಸಲು ನಿರ್ಧರಿಸಿದರು. 2019ರ ಆ.15ರಂದು ಉದ್ಘಾಟನೆ ನಡೆಸಬೇಕಿತ್ತು. ಆದರೆ ಪ್ರವಾಹದಿಂದಾಗಿ, ಕಟ್ಟೆ ಸಂಪೂರ್ಣ ಜಲಾವೃತವಾಯಿತು. ಮತ್ತೆ ದುರಸ್ತಿ ಮಾಡಿ, ಸುಣ್ಣ ಬಣ್ಣಗಳಿಂದ ಅಲಂಕರಿಸಲಾಯಿತು’ ಎಂದು ಗ್ರಾಮಸ್ಥ ಬಸವರಾಜ ಬಾರ್ಕಿ ತಿಳಿಸಿದರು.