<p><strong>ಹಿರೇಕೆರೂರು</strong>: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಶಿಷ್ಯನ ಸಾಧನೆಯಲ್ಲಿ ಸಂತಸ ಕಾಣುವ ಗುರುಗಳ ಸೇವೆ ಸ್ಮರಣೀಯವಾದುದು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.</p>.<p>ಪಟ್ಟಣದ ನೌಕರರ ಭವನದಲ್ಲಿ ಸಾತೇನಹಳ್ಳಿ ಗ್ರಾಮದ ಕರಡೇರ ಪ್ರತಿಷ್ಠಾನ, ಕೆ.ಎನ್.ಗ್ರೂಪ್ ಬೆಂಗಳೂರು ವತಿಯಿಂದ ಕೊಡಮಾಡುವ ವಿದ್ಯಾಭೂಷಣ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ, ಉತ್ತಮ ನಾಗರಿಕನ್ನಾಗಿಸಿ ಸಧೃಡ ಸಮಾಜ ನಿರ್ಮಾಣ ಮಾಡುವ ಮಹತ್ತರವಾದ ಜವಬ್ದಾರಿ ಶಿಕ್ಷಕರ ಮೇಲಿದ್ದು, ಶಿಕ್ಷಕರು ಮಕ್ಕಳಲ್ಲಿರುವ ತಪ್ಪುಗಳನ್ನು ತಿದ್ದಿ ಅವರಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಈಶ್ವರಪ್ಪ ಕರಡೇರ ಪ್ರತಿಷ್ಠಾನದಿಂದ ಸಮಾಜಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.</p>.<p>ಬ್ಯಾಡಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾದೇವ ಕರಿಯಣ್ಣನವರ, ಸಾಹಿತಿ ಜೀವರಾಜ್ ಛತ್ರದ, ಕರಡೇರ ಪ್ರತಿಷ್ಠಾನ ಗೌರವ ಕಾರ್ಯದರ್ಶಿ, ಶಿಕ್ಷಕ ಸುರೇಶ ಕರಡೇರ ಮಾತನಾಡಿದರು.</p>.<p>ಶಿಕ್ಷಕರಾದ ಎನ್.ಸುರೇಶ ಕುಮಾರ,ಇಂದಿರಾ ಕಂಗೂರಿ,ಅಶ್ವೀನಿ ಬಿದರಿ,ಎಚ್.ಡಿ.ಹಂಸಭಾವಿ, ಸಿ.ಬಿ.ಪಾಟೀಲ, ಬಸವರಾಜ ಕೊಳ್ಳಿ, ಎಸ್.ಎಫ್. ಜಂಗ್ಲೇಪ್ಪನವರ,ಮಂಜಪ್ಪ ಯಾಲಕ್ಕಿ,ಗುರುರಾಜ ಚಂದ್ರಕೇರ ಅವರಿಗೆ ವಿದ್ಯಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಸೋಮು ಕರಡೇರ ಅಧ್ಯಕ್ಷತೆ ವಹಿಸಿದ್ದರು, ಎಂ.ಬಿ.ಕಾಗಿನಲ್ಲಿ, ಯು.ಬಿ.ಕೊನಪ್ಪನವರ, ಎಚ್.ವಿ.ಬೆಟ್ಬಳ್ಳೇರ, ಭೀಮನಗೌಡ ಪಾಟೀಲ, ಸಿದ್ದರಾಮೇಶ್ವರ ಅಜಗೊಂಡ್ರ, ಜಗದೀಶ ಅಮ್ರಧ ಮಮತಾ ಕರಡೇರ,ಕವನಾ ಕರಡೇರ ಅಶೋಕ ಯಲಿವಾಳ ಪ್ರಭು ಕರಡೇರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರು</strong>: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಶಿಷ್ಯನ ಸಾಧನೆಯಲ್ಲಿ ಸಂತಸ ಕಾಣುವ ಗುರುಗಳ ಸೇವೆ ಸ್ಮರಣೀಯವಾದುದು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.</p>.<p>ಪಟ್ಟಣದ ನೌಕರರ ಭವನದಲ್ಲಿ ಸಾತೇನಹಳ್ಳಿ ಗ್ರಾಮದ ಕರಡೇರ ಪ್ರತಿಷ್ಠಾನ, ಕೆ.ಎನ್.ಗ್ರೂಪ್ ಬೆಂಗಳೂರು ವತಿಯಿಂದ ಕೊಡಮಾಡುವ ವಿದ್ಯಾಭೂಷಣ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ, ಉತ್ತಮ ನಾಗರಿಕನ್ನಾಗಿಸಿ ಸಧೃಡ ಸಮಾಜ ನಿರ್ಮಾಣ ಮಾಡುವ ಮಹತ್ತರವಾದ ಜವಬ್ದಾರಿ ಶಿಕ್ಷಕರ ಮೇಲಿದ್ದು, ಶಿಕ್ಷಕರು ಮಕ್ಕಳಲ್ಲಿರುವ ತಪ್ಪುಗಳನ್ನು ತಿದ್ದಿ ಅವರಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಈಶ್ವರಪ್ಪ ಕರಡೇರ ಪ್ರತಿಷ್ಠಾನದಿಂದ ಸಮಾಜಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.</p>.<p>ಬ್ಯಾಡಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾದೇವ ಕರಿಯಣ್ಣನವರ, ಸಾಹಿತಿ ಜೀವರಾಜ್ ಛತ್ರದ, ಕರಡೇರ ಪ್ರತಿಷ್ಠಾನ ಗೌರವ ಕಾರ್ಯದರ್ಶಿ, ಶಿಕ್ಷಕ ಸುರೇಶ ಕರಡೇರ ಮಾತನಾಡಿದರು.</p>.<p>ಶಿಕ್ಷಕರಾದ ಎನ್.ಸುರೇಶ ಕುಮಾರ,ಇಂದಿರಾ ಕಂಗೂರಿ,ಅಶ್ವೀನಿ ಬಿದರಿ,ಎಚ್.ಡಿ.ಹಂಸಭಾವಿ, ಸಿ.ಬಿ.ಪಾಟೀಲ, ಬಸವರಾಜ ಕೊಳ್ಳಿ, ಎಸ್.ಎಫ್. ಜಂಗ್ಲೇಪ್ಪನವರ,ಮಂಜಪ್ಪ ಯಾಲಕ್ಕಿ,ಗುರುರಾಜ ಚಂದ್ರಕೇರ ಅವರಿಗೆ ವಿದ್ಯಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಸೋಮು ಕರಡೇರ ಅಧ್ಯಕ್ಷತೆ ವಹಿಸಿದ್ದರು, ಎಂ.ಬಿ.ಕಾಗಿನಲ್ಲಿ, ಯು.ಬಿ.ಕೊನಪ್ಪನವರ, ಎಚ್.ವಿ.ಬೆಟ್ಬಳ್ಳೇರ, ಭೀಮನಗೌಡ ಪಾಟೀಲ, ಸಿದ್ದರಾಮೇಶ್ವರ ಅಜಗೊಂಡ್ರ, ಜಗದೀಶ ಅಮ್ರಧ ಮಮತಾ ಕರಡೇರ,ಕವನಾ ಕರಡೇರ ಅಶೋಕ ಯಲಿವಾಳ ಪ್ರಭು ಕರಡೇರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>