ಸಾವಿರಾರು ಮಂದಿ: ಎಣಿಕೆ ಕೇಂದ್ರದ ಹೊರಗೆ ಬೆಳಿಗ್ಗೆಯಿಂದಲೇ ಸಾವಿರಾರು ಮಂದಿ ನೆರೆದಿದ್ದರು. ಮುಂಜಾಗ್ರತೆಗಾಗಿ ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಎಲ್ಬಿಪಿ ಭೀಮಾನಾಯ್ಕ ಅವರು ಗೆಲುವು ಖಚಿತವಾಗುತ್ತಿದ್ದಂತೆ ಪ್ರತಿಸ್ಪರ್ಧಿ, ಬಿಜೆಪಿಯ ಅಭ್ಯರ್ಥಿ ನೇಮರಾಜ ನಾಯ್ಕ ಅಂತಿಮ ಫಲಿತಾಂಶ ಹೊರ ಬೀಳುವ ಮುನ್ನವೆ ಎಣಿಕೆ ಕೇಂದ್ರದಿಂದ ಹೊರನಡೆದರು. ಅವರ ಜೊತೆಗೆ ಕೇವಲ ಒಬ್ಬರು ಮಾತ್ರ ಇದ್ದರು. ಎಂ.ಎಸ್.ಸೋಮಲಿಂಗಪ್ಪ, ಎನ್.ವೈ.ಗೋಪಾಲಕೃಷ್ಣ, ಜಿ.ಸೋಮಶೇಖರ ರೆಡ್ಡಿ, ಈ.ತುಕಾರಾಂ ಅವರುಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದರು.