ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಕುಳಿಯಾಡಿ, ಹುಚ್ಚೆದ್ದು ಕುಣಿದರು...

Last Updated 16 ಮೇ 2018, 10:21 IST
ಅಕ್ಷರ ಗಾತ್ರ

ಬಳ್ಳಾರಿ:  ನಗರದ ಆರ್‌ಬಿವೈಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆಯು, ನಗರದ ಹಲವೆಡೆ ಸಾವಿರಾರು ಕಾರ್ಯಕರ್ತರ ಓಕುಳಿಯಾಟ ಮತ್ತು ಪಟಾಕಿ ಸಂಭ್ರಮಕ್ಕೆ ದಾರಿ ಮಾಡಿತ್ತು.

ಪ್ರತಿ ಬಾರಿ ಫಲಿತಾಂಶ ಪ್ರಕಟವಾದಾಗಲೂ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಶಿಳ್ಳೆ, ಕೇಕೆ ಹಾಕುತ್ತಿದ್ದರು. ಗೆಲುವಿನ ಚಿಹ್ನೆ ತೋರಿ ಕುಣಿದಾಡುತ್ತಿದ್ದರು. ಕೊಳಗಲ್‌ ರಸ್ತೆಯ ಪ್ರಮುಖ ವೃತ್ತಗಳಲ್ಲಿ, ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆಕಾಶಕ್ಕೆ ಓಕುಳಿ ಎರಚಿದರು.

ಸಾವಿರಾರು ಮಂದಿ: ಎಣಿಕೆ ಕೇಂದ್ರದ ಹೊರಗೆ ಬೆಳಿಗ್ಗೆಯಿಂದಲೇ ಸಾವಿರಾರು ಮಂದಿ ನೆರೆದಿದ್ದರು. ಮುಂಜಾಗ್ರತೆಗಾಗಿ ಅಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಎಲ್‌ಬಿಪಿ ಭೀಮಾನಾಯ್ಕ ಅವರು ಗೆಲುವು ಖಚಿತವಾಗುತ್ತಿದ್ದಂತೆ ಪ್ರತಿಸ್ಪರ್ಧಿ, ಬಿಜೆಪಿಯ ಅಭ್ಯರ್ಥಿ ನೇಮರಾಜ ನಾಯ್ಕ ಅಂತಿಮ ಫಲಿತಾಂಶ ಹೊರ ಬೀಳುವ ಮುನ್ನವೆ ಎಣಿಕೆ ಕೇಂದ್ರದಿಂದ ಹೊರನಡೆದರು. ಅವರ ಜೊತೆಗೆ ಕೇವಲ ಒಬ್ಬರು ಮಾತ್ರ ಇದ್ದರು. ಎಂ.ಎಸ್‌.ಸೋಮಲಿಂಗಪ್ಪ, ಎನ್‌.ವೈ.ಗೋಪಾಲಕೃಷ್ಣ, ಜಿ.ಸೋಮಶೇಖರ ರೆಡ್ಡಿ, ಈ.ತುಕಾರಾಂ ಅವರುಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT