ಬಿಎಜೆಎಸ್ಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ‘ಭ್ರಷ್ಟಾಚಾರ, ನಕಲಿ ನೋಟು ಚಲಾವಣೆಯಂತಹ ಸಮಸ್ಯೆ ಪರಿಹರಿಸಲು ಅನಾಣ್ಯೀಕರಣ ಅಗತ್ಯ ಎಂದು ಡಾ.ಅಂಬೇಡ್ಕರ್ ಸೇರಿದಂತೆ ಅನೇಕ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ’ ಎಂದು ಹೇಳಿದರು.ಹಂಸಭಾವಿ ಎಂಎಎಸ್ಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಡಿ.ಎಲ್. ಏಕಬೋಟೆ ಉಪನ್ಯಾಸ ನೀಡಿದರು.ಪ್ರಾಚಾರ್ಯ ಎಲ್.ವಿ. ಸಂಗಳದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ಸೀತಾಳದ ಸ್ವಾಗತಿಸಿದರು. ಬಸವರಾಜಪ್ಪ ಪಿ.ಟಿ. ಪರಿಚಯಿಸಿದರು. ಡಾ. ರವಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಬಿ. ಕುಂಬಾರ ನಿರೂಪಿಸಿದರು. ಬಸವರಾಜ ಹುಗ್ಗಿ ವಂದಿಸಿದರು.