ಸ್ಥಳಕ್ಕೆ ಭೇಟಿ ನೀಡಿದ ಹಿರೇಕೆರೂರ ವಾಯವ್ಯ ಸಾರಿಗೆ ಘಟಕ ವ್ಯವಸ್ಥಾಪಕ ಎಸ್.ಶಿವಮೂರ್ತಿ, ‘ಬತ್ತೀಕೊಪ್ಪ ಊರೊಳಗೆ ಬಸ್ಗಳನ್ನು ಬಿಡಲು ತಕರಾರಿಲ್ಲ. ಆದರೆ, ನಿರೀಕ್ಷಿತ ಆದಾಯದ ಸಿಗುವುದಿಲ್ಲ. ಹೀಗಾಗಿ ಹಿರೇಕೆರೂರ–ರಾಣೆಬೆನ್ನೂರಿಗೆ ಹೋಗುವ ಪ್ರಯಾಣಿಕರಿಗೆ ಇದರಿಂದ ತೊಂದರೆ ಆಗುತ್ತದೆ. ಆದರೂ ನಿತ್ಯ ಹೆಚ್ಚುವರಿ 2 ಬಾರಿ ಊರೊಳಗೆ ಬಸ್ ಓಡಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.