‘ಪಂಚಾಯ್ತಿ ವ್ಯವಸ್ಥೆಯಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬೆಂಗಳೂರಿನಲ್ಲಿ ಸಭೆ ಕರೆದಿದ್ದರು. ಆದರೆ, ಇತರ ಪಕ್ಷಗಳು ಬೆಂಬಲಿಸಲಿಲ್ಲ. ಹಿಂದೆ ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೂ ಹಿಂದೆ ಮೀಸಲಾತಿ ಇರಲಿಲ್ಲ’ ಎಂದ ಅವರು, ‘ಆದರೆ, ತಮ್ಮ ಹಕ್ಕುಗಳನ್ನು ನಿಜವಾಗಿಯೂ ರಕ್ಷಿಸಿದವರು ಯಾರು? ತುಳಿಯಲು ಯತ್ನಿಸಿದವರು ಯಾರು? ಎಂಬುದನ್ನೇ ತಿಳಿದುಕೊಳ್ಳದ ಜನತೆ ಯಾವುದೋ ‘ಮೋಡಿ’ಗೆ ಬಲಿಯಾಗಿ ಯಾರಿಗೋ ಮತ ಹಾಕುತ್ತಾರೆ. ನಮ್ಮವರೂ (ಕಾಂಗ್ರೆಸ್) ಸರಿಯಾಗಿ ಜನರಿಗೆ ತಿಳಿಸದೇ ತಾವೇ ಸೋಲು ತಂದುಕೊಳ್ಳುತ್ತಾರೆ’ ಎಂದರು.