‘ಸಕಾರಾತ್ಮಕ ಭಾವನೆ ಬೆಳೆಸಿಕೊಂಡಿದ್ದ ಅವರು ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನು ಉಂಡು ಅದನ್ನು ಮೆಟ್ಟಿ ನಿಂತು ಎತ್ತರಕ್ಕೆ ಬೆಳೆದವರು. ಅಪಾರ ಪುಸ್ತಕ ಪ್ರೀತಿ ಬೆಳೆಸಿಕೊಂಡಿದ್ದ ಅವರು ಅನೇಕರಿಗೆ ಆಪತ್ಭಾಂಧವರಾಗಿದ್ದರು’ ಎಂದರು.
ಪತ್ರಕರ್ತ, ಲೇಖಕ ಶಿವರಂಜನ್ ಸತ್ಯಂಪೇಟೆ, ‘ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿದ್ದರೂ ಅವುಗಳನ್ನು ಆಚರಿಸದೆ ಅಪ್ಪಟ ವೈಚಾರವಾದಿಗಳಾಗಿದ್ದರು. ಅಸ್ಪೃಶ್ಯತೆ, ಜಾತಿ ಪದ್ಧತಿ ತೊಲಗಿಸುವಲ್ಲಿ ಸಾಕಷ್ಟು ದುಡಿದಿದ್ದಾರೆ. ಸದಾ ಓದು, ಬರಹ ಹಾಗೂ ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರು. ಪ್ರೀತಿ, ಮಮತೆ, ತಾಳ್ಮೆ, ಕಾಳಜಿ, ಕಕ್ಕುಲಾತಿ, ಗೌರವ, ಸಹಾಯ, ಸಹಕಾರದ ಗುಣಗಳು ಇವರ ಅಂತರಂಗದಲ್ಲಿ ಅಡಗಿದ್ದವು ಎಂದು ವಿವರಿಸಿದರು.