ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನ ಗೋಗಿಯಿಂದ ಅಕ್ಕಿಯನ್ನುಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಮಾಹಿತಿ ಪಡೆದ ಪೊಲೀಸರು ತಾಲ್ಲೂಕಿನ ಬೀದರ್–ಬೆಂಗಳೂರು ರಾಜ್ಯ ಹೆದ್ದಾರಿಯ ಚಿಗರಳ್ಳಿ ಕ್ರಾಸ್ ಬಳಿ ವಾಹನ ತಡೆದರು. ಲಾರಿಯಲ್ಲಿ ಸುಮಾರು 260 ಕ್ವಿಂಟಲ್ ಅಕ್ಕಿ ಇತ್ತು. ಚಾಲಕ ಪರಾರಿ ಆಗಿದ್ದು, ಕ್ಲೀನರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.