‘ಮೌರ್ಯ, ಶಾತವಾಹನರ ಕಾಲದ ನಕಾಶೆ ಹಾಕಲಾಗಿದ್ದು, ಆ ಕಾಲದಲ್ಲಿ ರಾಜ್ಯದ ಪ್ರಮುಖ ಸ್ಥಳಗಳಾಗಿದ್ದ ರಾಯಚೂರು ಜಿಲ್ಲೆಯ ಮಸ್ಕಿ, ಕೊಪಬಲ್ ಎಂದಿರುವ ಕೊಪ್ಪಳದ ಹೆಸರು ಉಲ್ಲೇಖಿಸಲಾಗಿದೆ. ಸನ್ನತಿಯಲ್ಲಿ ಸಿಕ್ಕಿರುವ ಅಶೋಕನ ಶಿಲ್ಪ ಕೂಡ ನಕಾಶೆಯಲ್ಲಿದೆ’ ಎಂದು ಇತಿಹಾಸ ಸಂಶೋಧಕ, ಕೊಪ್ಪಳದ ಡಾ.ಶರಣಬಸಪ್ಪ ಕೋಲ್ಕಾರ ತಿಳಿಸಿದರು.