ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಶ್ರೀಶಾನಂದ ಅವರು, ‘ಆದಾಯ ಗಳಿಸಿದವರೆಲ್ಲರೂ ತೆರಿಗೆ ಕೊಡಲೇಬೇಕು. ಚಾಣಕ್ಯನು ತನ್ನ ಅರ್ಥಶಾಸ್ತ್ರದಲ್ಲಿ ತೆರಿಗೆ ಮತ್ತು ಸಾರ್ವಜನಿಕ ವಿನಿಯೋಗದ ಬಗ್ಗೆ ಚಂದ್ರಗುಪ್ತನಿಗೆ ಒಂದು ಮಾತನ್ನು ಹೇಳಿದ್ದ. ಸಮುದ್ರದ ನೀರು ಆವಿಯಾಗಿ, ಮೋಡವಾಗಿ ಮತ್ತೆ ಮಳೆಯ ರೂಪದಲ್ಲಿ ಭೂಮಿಗೆ ಬಿದ್ದು ನದಿಗಳ ಮೂಲಕ ಅದೇ ಸಮುದ್ರ ಸೇರುತ್ತದೆ. ಹಾಗೆಯೇ ತೆರಿಗೆ ಕೂಡ. ನಾವು ದೇಶದ ಸಂಪನ್ಮೂಲವನ್ನು ಬಳಸಿ ಆದಾಯ ಗಳಿಸಿದರೆ ಅದರಲ್ಲಿ ದೇಶಕ್ಕೆ ತೆರಿಗೆ ರೂಪದಲ್ಲಿ ವಾಪಸ್ ಸಂದಾಯ ಮಾಡಲೇಬೇಕು’ ಎಂದು ವಿವರಣೆ ನೀಡಿದರು.