ಕಲಬುರ್ಗಿ: ಜಿಲ್ಲೆಯ ಚಿತ್ತಾಪುರ ಪಟ್ಟಣದ ಬಳಿ ಓರಿಯೆಂಟಲ್ ಸಿಮೆಂಟ್ಸ್ ಕಂಪನಿಗೆ ಸಿಮೆಂಟ್ ತರಲು ಹೊರಟಿದ್ದ ಲಾರಿ ಚಾಲಕ ಹಾಗೂ ಕ್ಲೀನರ್ಗೆ ಕಾರ್ಖಾನೆಯಿಂದ ಬಂದ ಲಾರಿ ಡಿಕ್ಕಿ ಹೊಡೆದು ಭಾನುವಾರ ರಾತ್ರಿ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದಾರೆ.
ಸಿಮೆಂಟ್ ತರಲು ಕಾರ್ಖಾನೆಯತ್ತ ಹೊರಟಿದ್ದ ಲಾರಿಯ ಡೀಸೆಲ್ ಖಾಲಿಯಾಗಿತ್ತು. ಚಿತ್ತಾಪುರದ ಪೆಟ್ರೋಲ್ ಪಂಪ್ನಿಂದ ಇಂಧನವನ್ನು ತಂದು ಅದನ್ನು ಲಾರಿಯ ಟ್ಯಾಂಕ್ಗೆ ಸುರಿಯುತ್ತಿದ್ದ ಸಂದರ್ಭದಲ್ಲಿ ಬಂದ ಲಾರಿಯು ಇಬ್ಬರ ಮೇಲೆ ಹಾಯ್ದಿದೆ.
ಮೃತಪಟ್ಟವರ ಹೆಸರುಗಳು ತಿಳಿದು ಬಂದಿಲ್ಲ. ಒಬ್ಬರು ದಂಡೋತಿ ಗ್ರಾಮ, ಮತ್ತೊಬ್ಬರು ಕಟ್ಟಿ ಸಂಗಾವಿ ಗ್ರಾಮದವರು ಎಂದು ತಿಳಿದು ಬಂದಿದೆ.