ಕಳೆದ 8 ದಿನಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿತ್ತು. ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ. ಯುವಕನ ಕುಟುಂಬಕ್ಕೆ ಯಾವುದೇ ಜಮೀನು ಇಲ್ಲ. ಕೃಷಿ ಕೂಲಿ ಮೇಲೆಯೇ ಇವರ ಜೀವನ ಸಾಗುತ್ತಿತ್ತು. ಯುವಕನ ಸಾವಿನಿಂದ ಕುಟುಂಬ ವರ್ಗ ಸಂಕಷ್ಟಕ್ಕೀಡಾಗಿದೆ.