‘ಸಚಿವ ಸಂಪುಟ ರಚನೆ ಮುಗಿದ ಬಳಿಕ ಗ್ರಾಮದ ಮುಖಂಡರು, ಸ್ವಾಮೀಜಿಗಳು, ಶಾಸಕರು, ಸಂಸದರನ್ನು ಒಳಗೊಂಡ ನಿಯೋಗದ ಜತೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಕೊನೆ ಪಕ್ಷ ರಟಕಲ್– ಅಣಕಲ್ ಸೇರಿಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರವೆಂದು ಘೋಷಿಸಲು ಒತ್ತಡ ಹೇರಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಶ್ರೀಕಾಂತ ನುಂಗಾರಿ ಹೇಳಿದರು.