ಜೂನ್ 29ರಂದು ರಾತ್ರಿ 11.30ರ ಸುಮಾರಿಗೆ ಸಾಗರ ಹಾಗೂ ಅವರ ಸ್ನೇಹಿತರು ಇಲ್ಲಿನ ಜೇವರ್ಗಿ ರಸ್ತೆಯ ಅಂಡರ್ ಬ್ರಿಜ್ ಬಳಿ ಹೋಗುತ್ತಿದ್ದಾಗ, ಬೈಕ್ನಲ್ಲಿ ಬಂದ ಆರೋಪಿಗಳು ಏಕಾಏಕಿ ದಾಳಿ ಮಾಡಿದರು. ಮಾರಕಾಸ್ತ್ರಗಳಿಂದ ಸಾಗರ್ ಅವರ ಕುತ್ತಿಗೆ, ತಲೆ, ಕೈಗಳಿಗೆ ಹೊಡೆದರು. ತೀವ್ರ ರಕ್ತಸ್ರಾವದಿಂದ ಸಾಗರ ನೆಲಕ್ಕೆ ಬಿದ್ದ ಮೇಲೆ ಪರಾರಿಯಾದರು. ಇದು ಕೊಲೆ ಯತ್ನ ಎಂದು ಸಾಗರ ಅವರ ತಂದೆ ಮಹಾಂತೇಶ ದೂರು ನೀಡಿದ್ದರು.