ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷವು ನೂರಾರು ಜನರಿಂದ ದೇಣಿಗೆ ಸಂಗ್ರಹಿಸಿ ಸಮ್ಮೇಳನ, ಇತರ ಕಾರ್ಯಕ್ರಮಗಳನ್ನು ನಡೆಸುತ್ತದೆ. ದೊಡ್ಡ ದೊಡ್ಡ ಬಂಡವಾಳದಾರರಿಂದ ಪಕ್ಷ ಹಣ ಸಂಗ್ರಹಿಸುವುದಿಲ್ಲ. ಬಿಸಿಎಂ ಇಲಾಖೆ ಅಧಿಕಾರಿಗಳಿಗೂ ಸಮ್ಮೇಳನಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆಯ ಒಂದು ಭಾಗವನ್ನು ಭರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತೇ ಹೊರತು ಎಲ್ಲ ಖರ್ಚನ್ನೂ ಅವರೇ ವಹಿಸಿಕೊಳ್ಳಲಿ ಎಂದಿಲ್ಲ. ನಮ್ಮ ಪಕ್ಷದ ಮುಖಂಡರ ಮೊಬೈಲ್ನಲ್ಲಿ ದಾಖಲಾಗಿರುವ ಧ್ವನಿ ಮುದ್ರಣವನ್ನುಹಲವು ಕಡೆ ಹಂಚಿಕೆ ಮಾಡಿಕೊಳ್ಳಲಾಗಿದೆ. ಈ ಹಂತದಲ್ಲಿ ಪಕ್ಷದ ಮುಖಂಡರಿಂದ ಯಾವುದೇ ಹಣದ ದುರುಪಯೋಗ ನಡೆದಿಲ್ಲ’ ಎಂದರು.