ಸೋಮವಾರ ಸಂಜೆ ಎಸಿಬಿ ದಾಳಿಗೆ ಒಳಗಾಗಿದ್ದ ಭಾವಿಕಟ್ಟಿ ಹಾಗೂ ಸಹಾಯಕ ಸಾರಿಗೆ ನಿಯಂತ್ರಣಾಧಿಕಾರಿ ಜಯವಂತ್ ಅವರ ಬಂಧನವಾಗಿ 24 ಗಂಟೆ ಕಳೆದಿದ್ದರಿಂದ ಅಮಾನತು ಪ್ರಕ್ರಿಯೆಯನ್ನು ನಿಗಮ ಆರಂಭಿಸಿದೆ. ಹೀಗಾಗಿ ಭಾವಿಕಟ್ಟಿ ಅವರ ಜಾಗಕ್ಕೆ ಕೇಂದ್ರ ಕಚೇರಿಯಲ್ಲಿ ಉಪ ಪ್ರಧಾನ ಸಂಚಾರ ವ್ಯವಸ್ಥಾಪಕರಾಗಿದ್ದ ತಿಮ್ಮಾರೆಡ್ಡಿ ಅವರನ್ನು ವಿಭಾಗೀಯ ನಿಯಂತ್ರಣಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.