ಯಾದಗಿರಿ: ಸನ್ನತಿ ಬ್ಯಾರೇಜ್ನಿಂದ ಭೀಮಾ ನದಿಗೆ 3.50 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿದ್ದು, ನದಿಯಂಚಿನ ನಗರದ ಬಡಾವಣೆಗೆ ನೀರು ನುಗ್ಗಿದೆ.
ಭೀಮಾನದಿಗೆ ಹೊಂದಿಕೊಂಡಿರುವ ವೀರಭದ್ರೇಶ್ವರ ಬಡಾವಣೆಯ ವಿನಾಯಕ ದೇವಸ್ಥಾನ ಹಾಗೂ ಮನೆಗಳಿಗೆ ನೀರು ನುಗ್ಗಿ ಜಲಾವೃತ್ತಗೊಂಡಿದೆ.
ಭೀಮಾ ನದಿಗೆ ಮತ್ತಷ್ಟು ನೀರು ಹರಿಸುವ ಸಾಧ್ಯತೆ ಇರುವುದರಿಂದ ರೈಲ್ವೆ ಹಳಿಯ ಸಮೀಪ ನೀರು ಆವರಿಸುವ ಸಾಧ್ಯತೆ ಇದೆ. ಇದರಿಂದ ಭೀಮಾ ನದಿ ನೀರು ನಗರದ ವಿವಿಧ ಬಡಾವಣೆಗಳಿಗೆ ನುಗ್ಗುವ ಸಂಭವವಿದೆ ಎಂದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.