‘ಸಿಎಎ, ಎನ್ಆರ್ಸಿ ಕುರಿತು ಸರ್ಕಾರ, ಸಂಸತ್ತು ಸಂಧಾನ ಮಾಡಲು ಬರುವುದಿಲ್ಲ. ನಮಗಿರುವುದು ಸಂವಿಧಾನದ ಹೋರಾಟ ಮಾತ್ರ. ಹೆಣ್ಣುಮಕ್ಕಳಿಗೆ ಹಕ್ಕುಗಳನ್ನೇ ಕೊಡದ ಮನುಸ್ಕೃತಿಯನ್ನು ಒಪ್ಪಿಕೊಂಡ ಎಲ್ಲರನ್ನೂ ನಾವು ಹಿಮ್ಮೆಟ್ಟಿಸಬೇಕು. ಸಿಎಎ, ಎನ್ಆರ್ಸಿ, ಎನ್ಪಿಆರ್ಗಳನ್ನು ಜಾರಿಗೆ ತರುವಲ್ಲಿ ಬಿಜೆಪಿಯ ಮಾತೃಸಂಸ್ಥೆಆರ್ಎಸ್ಎಸ್ ಇದೆ. ಎರಡನ್ನೂ ಜನರು ತಿರಸ್ಕರಿಸಬೇಕು. ಮತದಾನ ಹಕ್ಕು ಕಿತ್ತುಕೊಳ್ಳಲು ಸಹ ಹುನ್ನಾರ ನಡೆದಿದೆ. ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಇವಿಎಂನ ಅಕ್ರಮದಿಂದಲೇ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಯಾರೂ ಮರೆಯಬಾರದು. ಮತ್ತೆ ಮತಪತ್ರ ಆಧಾರಿತ ಚುನಾವಣೆಯೇ ಜಾರಿಗೆ ಬರಬೇಕು ಎಂದು ಹೇಳಿದರು.