ಮೂರು ಹೋರಿ ಇದ್ದ ಈ ವಾಹನವನ್ನು ಠಾಣೆಗೆ ತಂದರು. ಬೆಳಿಗ್ಗೆಈ ವಿಷಯ ಪಟ್ಟಣದಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ಎರಡೂ ಕೋಮಿನ ಜನರು ಠಾಣೆ ಹತ್ತಿರ ಜಮಾಯಿಸಿದರು. ಶಾಂತಿ ಮಾತುಕತೆ ನಡೆಯುವಾಗಲೇ, ವಾಹನ ಸವಾರನ ಪರ ಗುಂಪು ಇನ್ನೊಂದು ಗುಂಪಿನ ಯುವಕನ ಮೇಲೆ ದಿಢೀರ್ ಹಲ್ಲೆ ನಡೆಸಿತು. ಮನಸೋ ಇಚ್ಛೆ ಯುವಕನನ್ನು ಥಳಿಸಿ, ಬೈಕ್ ಜಖಂಗೊಳಿಸಿದರು. ಮನೆಯೊಂದರ ಮುಂದಿದ್ದ ಕಾರಿಗೆ ಕಲ್ಲು ತೂರಿ ಗಾಜು ಪುಡಿಪುಡಿ ಮಾಡಿದರು.