<p><strong>ಕಲಬುರಗಿ</strong>: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ, ಬೆಂಗಳೂರಿನಿಂದ ಸ್ಥಳಾಂತರಿಸಿದ್ದ ಕೈದಿ ಮತ್ತು ಈ ಮೊದಲೇ ಇದ್ದ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಜೈಲು ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.</p>.<p>ಟಿ.ವಿ ನೋಡುವ ವಿಚಾರಕ್ಕೆ ಮಂಗಳವಾರ ತಡರಾತ್ರಿ ಶುರುವಾದ ಅಸಮಾಧಾನ ಬುಧವಾರ ಬೆಳಿಗ್ಗೆ 9.45ರ ಹೊತ್ತಿಗೆ ಹೊಡೆದಾಟಕ್ಕೆ ತಿರುಗಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಅರಿತ ಜೈಲು ಸಿಬ್ಬಂದಿ, ಅಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಎಲ್ಲರನ್ನು ಚದುರಿಸಿ ಕೈದಿಗಳನ್ನು ಲಾಕ್ ಮಾಡಿದ್ದಾರೆ.</p>.<p>ಮಾಹಿತಿ ತಿಳಿದ ಧಾವಿಸಿದ ಸಿಎಆರ್ನ ತುಕಡಿ ಸೇರಿದಂತೆ ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.</p>.<p>‘ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತರಿಸಿದ್ದ ವಿಚಾರಣಾಧೀನ ಕೈದಿ ವೆಂಕಟರಮಣ ಸ್ವಾಮಿ ಹಾಗೂ ಸ್ಥಳೀಯ ಕೈದಿ ನಡುವೆ ಮಂಗಳವಾರ ತಡರಾತ್ರಿ ಗಲಾಟೆ ನಡೆದಿದೆ. ಬ್ಯಾರಕ್–1ರಲ್ಲಿ ಇದ್ದ ಟಿ.ವಿ ಧ್ವಂಸಗೊಳಿಸಲಾಗಿದೆ. ಬುಧವಾರ ಬೆಳಿಗ್ಗೆ ಮತ್ತೆ ಮಾರಾಮಾರಿ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.</p>.<p>ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಡಿಸಿಪಿ (ಅಪರಾಧ) ಪ್ರವೀಣ ನಾಯಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. </p>.<p>ಕೈದಿಗಳಿಗೆ ‘ರಾಜಾತಿಥ್ಯ’ ನೀಡುತ್ತಿರುವ ಹಾಗೂ ‘ಜೈಲಿನ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಲಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಹಂಚಿಕೆ ಆಗಿ ಸದ್ದು ಮಾಡಿತ್ತು.</p>.<p><strong>ಯಾರಿತ ವೆಂಕಟರಮಣ?:</strong></p>.<p>‘ಬೆಂಗಳೂರು ಮೂಲದ ವೆಂಕಟರಮಣ ಸ್ವಾಮಿ ವಿರುದ್ಧ ಎರಡು ಕೊಲೆ ಪ್ರಕರಣಗಳಿವೆ. ಒಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವೆಂಕಟರಮಣ ಸ್ವಾಮಿ, 2006ರಿಂದ 2019ರ ತನಕ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಬಳಿಕ ಮತ್ತೊಂದು ಕೊಲೆ ಕೃತ್ಯದಲ್ಲಿ ಸಿಕ್ಕಿಬಿದ್ದು ಬೆಂಗಳೂರಿನ ಜೈಲು ಸೇರಿದ್ದ. ಆ ಜೈಲಿನಲ್ಲೂ ಒರಟಾಗಿ ನಡೆದುಕೊಂಡಿದ್ದ. ಎರಡು ಕೊಲೆ ಮಾಡಿದ್ದಾಗಿ ಸಹ ಕೈದಿಗಳ ಮೇಲೆ ಹಕ್ಕುಸಾಧಿಸಲು ಹವಣಿಸುತ್ತಿದ್ದ. ಪರಿಣಾಮ ಸ್ಥಳಾಂತರ ಶಿಕ್ಷೆಗೆ ಒಳಗಾದ ಆತನನ್ನು 2025ರ ಅಕ್ಟೋಬರ್ 17ರಂದು ಕಲಬುರಗಿ ಜೈಲಿಗೆ ಸ್ಥಳಾಂತರಿಸಲಾಗಿತ್ತು’ ಎಂದು ಜೈಲಿನ ಮೂಲಗಳು ಹೇಳಿವೆ.</p>.<p>ಟಿ.ವಿ ವಿಚಾರಕ್ಕೆ ಗಲಾಟೆ ನಡೆದಿದ್ದು ಜೈಲು ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕೂಲಂಕಷವಾಗಿ ಪರಿಶೀಲಿಸಿ ತಪ್ಪಿತಸ್ಥ ಕೈದಿಗಳ ವಿರುದ್ಧ ದೂರು ದಾಖಲಿಸುತ್ತೇವೆ</p><p>–ಆರ್.ಅನಿತಾ ಮುಖ್ಯ ಜೈಲು ಅಧೀಕ್ಷಕಿ ಕಲಬುರಗಿ ಕೇಂದ್ರ ಕಾರಾಗೃಹ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ, ಬೆಂಗಳೂರಿನಿಂದ ಸ್ಥಳಾಂತರಿಸಿದ್ದ ಕೈದಿ ಮತ್ತು ಈ ಮೊದಲೇ ಇದ್ದ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಜೈಲು ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.</p>.<p>ಟಿ.ವಿ ನೋಡುವ ವಿಚಾರಕ್ಕೆ ಮಂಗಳವಾರ ತಡರಾತ್ರಿ ಶುರುವಾದ ಅಸಮಾಧಾನ ಬುಧವಾರ ಬೆಳಿಗ್ಗೆ 9.45ರ ಹೊತ್ತಿಗೆ ಹೊಡೆದಾಟಕ್ಕೆ ತಿರುಗಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಅರಿತ ಜೈಲು ಸಿಬ್ಬಂದಿ, ಅಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಎಲ್ಲರನ್ನು ಚದುರಿಸಿ ಕೈದಿಗಳನ್ನು ಲಾಕ್ ಮಾಡಿದ್ದಾರೆ.</p>.<p>ಮಾಹಿತಿ ತಿಳಿದ ಧಾವಿಸಿದ ಸಿಎಆರ್ನ ತುಕಡಿ ಸೇರಿದಂತೆ ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.</p>.<p>‘ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತರಿಸಿದ್ದ ವಿಚಾರಣಾಧೀನ ಕೈದಿ ವೆಂಕಟರಮಣ ಸ್ವಾಮಿ ಹಾಗೂ ಸ್ಥಳೀಯ ಕೈದಿ ನಡುವೆ ಮಂಗಳವಾರ ತಡರಾತ್ರಿ ಗಲಾಟೆ ನಡೆದಿದೆ. ಬ್ಯಾರಕ್–1ರಲ್ಲಿ ಇದ್ದ ಟಿ.ವಿ ಧ್ವಂಸಗೊಳಿಸಲಾಗಿದೆ. ಬುಧವಾರ ಬೆಳಿಗ್ಗೆ ಮತ್ತೆ ಮಾರಾಮಾರಿ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.</p>.<p>ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಡಿಸಿಪಿ (ಅಪರಾಧ) ಪ್ರವೀಣ ನಾಯಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. </p>.<p>ಕೈದಿಗಳಿಗೆ ‘ರಾಜಾತಿಥ್ಯ’ ನೀಡುತ್ತಿರುವ ಹಾಗೂ ‘ಜೈಲಿನ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಲಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಹಂಚಿಕೆ ಆಗಿ ಸದ್ದು ಮಾಡಿತ್ತು.</p>.<p><strong>ಯಾರಿತ ವೆಂಕಟರಮಣ?:</strong></p>.<p>‘ಬೆಂಗಳೂರು ಮೂಲದ ವೆಂಕಟರಮಣ ಸ್ವಾಮಿ ವಿರುದ್ಧ ಎರಡು ಕೊಲೆ ಪ್ರಕರಣಗಳಿವೆ. ಒಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವೆಂಕಟರಮಣ ಸ್ವಾಮಿ, 2006ರಿಂದ 2019ರ ತನಕ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಬಳಿಕ ಮತ್ತೊಂದು ಕೊಲೆ ಕೃತ್ಯದಲ್ಲಿ ಸಿಕ್ಕಿಬಿದ್ದು ಬೆಂಗಳೂರಿನ ಜೈಲು ಸೇರಿದ್ದ. ಆ ಜೈಲಿನಲ್ಲೂ ಒರಟಾಗಿ ನಡೆದುಕೊಂಡಿದ್ದ. ಎರಡು ಕೊಲೆ ಮಾಡಿದ್ದಾಗಿ ಸಹ ಕೈದಿಗಳ ಮೇಲೆ ಹಕ್ಕುಸಾಧಿಸಲು ಹವಣಿಸುತ್ತಿದ್ದ. ಪರಿಣಾಮ ಸ್ಥಳಾಂತರ ಶಿಕ್ಷೆಗೆ ಒಳಗಾದ ಆತನನ್ನು 2025ರ ಅಕ್ಟೋಬರ್ 17ರಂದು ಕಲಬುರಗಿ ಜೈಲಿಗೆ ಸ್ಥಳಾಂತರಿಸಲಾಗಿತ್ತು’ ಎಂದು ಜೈಲಿನ ಮೂಲಗಳು ಹೇಳಿವೆ.</p>.<p>ಟಿ.ವಿ ವಿಚಾರಕ್ಕೆ ಗಲಾಟೆ ನಡೆದಿದ್ದು ಜೈಲು ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕೂಲಂಕಷವಾಗಿ ಪರಿಶೀಲಿಸಿ ತಪ್ಪಿತಸ್ಥ ಕೈದಿಗಳ ವಿರುದ್ಧ ದೂರು ದಾಖಲಿಸುತ್ತೇವೆ</p><p>–ಆರ್.ಅನಿತಾ ಮುಖ್ಯ ಜೈಲು ಅಧೀಕ್ಷಕಿ ಕಲಬುರಗಿ ಕೇಂದ್ರ ಕಾರಾಗೃಹ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>