ಚಿಂಚೋಳಿ: ರಾಮ ಮಂದಿರ ನಿರ್ಮಾಣಕ್ಕೆ ಆರೆಸ್ಸೆಸ್ ಗೆ ಹಣ ನೀಡಿದ ಕಾಂಗ್ರೆಸ್ ಮುಖಂಡ!
ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕ ಅಶೋಕ ಪಾಟೀಲ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಸುಭಾಷ ರಾಠೋಡ ಅವರು ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಬೆಂಬಲ ಸೂಚಿಸಿ ವೈಯಕ್ತಿಕ ನೆರವು ನೀಡಿದರು.
ಮಂಗಳವಾರ ಕಾಂಗ್ರೆಸ್ ಮುಖಂಡರನ್ನು ಅಭಿಯಾನದ ಪ್ರಮುಖರು ಭೇಟಿಯಾದಾಗ ಮುಕ್ತ ಮನಸ್ಸಿನಿಂದ ನೆರವು ನೀಡಿ ಅಭಿಯಾನಕ್ಕೆ ಬೆಂಬಲ ಸೂಚಿಸಿದರು ಎಂದು ಅಶೋಕ ಪಾಟೀಲ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಒಟ್ಟು ₹ 15 ಸಾವಿರ ದೇಣಿಗೆ ರೂಪದಲ್ಲಿ ನಿಧಿ ಸಮರ್ಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ, ಮುಖಂಡರಾದ ಬಸವರಾಜ ಮಲಿ, ಗಂಗಾಧರ ಗಡ್ಡಿಮನಿ, ಶರಣು ಮೋತಕಪಳ್ಳಿ, ಸಂತೋಷ ಗುತ್ತೇದಾರ, ಅಭಿಯಾನದ ಪ್ರಮುಖರಾದ ನಾಗಪ್ಪ ಮೈಲ್ವಾರ್, ರೇವಣಸಿದ್ದ ಮೋಘಾ, ಸೂರ್ಯಕಾಂತ ಚಿಂಚೋಳಿಕರ ಮೊದಲಾದವರು ಉಪಸ್ಥಿತರಿದ್ದರು.