<p><strong>ಚಿಂಚೋಳಿ:</strong> ಪುರಸಭೆ ವ್ಯಾಪ್ತಿಯ ಕಲ್ಯಾಣ ಗಡ್ಡಿ ಬಡಾವಣೆಯ ಸರ್ಕಾರಿ ಕನ್ಯಾ ಶಾಲೆಯ ಬಳಿ ವಿದ್ಯುತ್ ತಂತಿ ಒಂದಕ್ಕೊಂದು ಬೆಸೆದುಕೊಂಡು ಬೆಂಕಿ ಹತ್ತಿದ್ದಲ್ಲದೇ ಕಳಚಿ ಬಿದ್ದು ನೆಲದ ಮೇಲೆ ಪಟಾಕಿಯಂತೆ ಸಿಡಿದು ನಾಗರಿಕರಲ್ಲಿ ಭೀತಿ ಸೃಷ್ಟಿಸಿತು.</p>.<p>ಸುದ್ದಿ ತಿಳಿದು ಬಡಾವಣೆಯ ಯುವ ಮುಖಂಡರು ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಮನವಿ ಮಾಡಿದರು.</p>.<p>ತಕ್ಷಣ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ವಿದ್ಯುತ್ ಪೂರೈಕೆ ಸ್ಥಗಿತ ಗೊಳಿಸಲು ಸ್ವಲ್ಪ ವಿಳಂಬವಾದರೂ ಅಲ್ಲಿಯೇ ಇದ್ದ ಜೀಪ್, ಕಾರು ಹಾಗೂ ಟ್ರಾಲಿ ಅಟೊ ಬೆಂಕಿಗೆ ಆಹುತಿಯಾಗುವ ಸಾಧ್ಯತೆಯಿತ್ತು. </p>.<p>ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪರಮೇಶ್ವರ ಬಿರಾದಾರ, ಎಇಇ ಕಾಮಣ್ಣ ಇಂಜಳ್ಳಿ ಮಾರ್ಗದರ್ಶನದಲ್ಲಿ ಶಾಖಾಧಿಕಾರಿ ರಾಘವೇಂದ್ರ, ಪವರ್ಮನ್ ಸುರೇಶ ಕುಂಬಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು.</p>.<p>ಬೆಳಿಗ್ಗೆ 7 ಗಂಟೆಗೆ ಘಟನೆ ನಡೆದಿದ್ದು, 4 ತಾಸುಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಸರಿಪಡಿಸಿದ 11.30ಕ್ಕೆ ವಿದ್ಯುತ್ ಪೂರೈಕೆ ಪುನರ್ ಆರಂಭ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ಪುರಸಭೆ ವ್ಯಾಪ್ತಿಯ ಕಲ್ಯಾಣ ಗಡ್ಡಿ ಬಡಾವಣೆಯ ಸರ್ಕಾರಿ ಕನ್ಯಾ ಶಾಲೆಯ ಬಳಿ ವಿದ್ಯುತ್ ತಂತಿ ಒಂದಕ್ಕೊಂದು ಬೆಸೆದುಕೊಂಡು ಬೆಂಕಿ ಹತ್ತಿದ್ದಲ್ಲದೇ ಕಳಚಿ ಬಿದ್ದು ನೆಲದ ಮೇಲೆ ಪಟಾಕಿಯಂತೆ ಸಿಡಿದು ನಾಗರಿಕರಲ್ಲಿ ಭೀತಿ ಸೃಷ್ಟಿಸಿತು.</p>.<p>ಸುದ್ದಿ ತಿಳಿದು ಬಡಾವಣೆಯ ಯುವ ಮುಖಂಡರು ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಮನವಿ ಮಾಡಿದರು.</p>.<p>ತಕ್ಷಣ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ವಿದ್ಯುತ್ ಪೂರೈಕೆ ಸ್ಥಗಿತ ಗೊಳಿಸಲು ಸ್ವಲ್ಪ ವಿಳಂಬವಾದರೂ ಅಲ್ಲಿಯೇ ಇದ್ದ ಜೀಪ್, ಕಾರು ಹಾಗೂ ಟ್ರಾಲಿ ಅಟೊ ಬೆಂಕಿಗೆ ಆಹುತಿಯಾಗುವ ಸಾಧ್ಯತೆಯಿತ್ತು. </p>.<p>ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪರಮೇಶ್ವರ ಬಿರಾದಾರ, ಎಇಇ ಕಾಮಣ್ಣ ಇಂಜಳ್ಳಿ ಮಾರ್ಗದರ್ಶನದಲ್ಲಿ ಶಾಖಾಧಿಕಾರಿ ರಾಘವೇಂದ್ರ, ಪವರ್ಮನ್ ಸುರೇಶ ಕುಂಬಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು.</p>.<p>ಬೆಳಿಗ್ಗೆ 7 ಗಂಟೆಗೆ ಘಟನೆ ನಡೆದಿದ್ದು, 4 ತಾಸುಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಸರಿಪಡಿಸಿದ 11.30ಕ್ಕೆ ವಿದ್ಯುತ್ ಪೂರೈಕೆ ಪುನರ್ ಆರಂಭ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>