ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ನಾಡ ಪಿಸ್ತೂಲ್: ಇಬ್ಬರ ಬಂಧನ

Last Updated 8 ಸೆಪ್ಟೆಂಬರ್ 2022, 7:35 IST
ಅಕ್ಷರ ಗಾತ್ರ

ಕಲಬುರಗಿ: ಅಕ್ರಮ ನಾಡ ಪಿಸ್ತೂಲ್‌ ಹೊಂದಿದ್ದ ಆರೋಪದಡಿ ಇಬ್ಬರನ್ನು ಯಡ್ರಾಮಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆಳಂದ ತಾಲ್ಲೂಕಿನ ಝಲಕಿ(ಕೆ) ಗ್ರಾಮದ ಗುರುಲಿಂಗಪ್ಪ ಮಚ್ಚೆಂದ್ರ ಮತ್ತು ಸೈಫನ್‌ಸಾಬ್ ಹುಸೇನ್‌ಸಾಬ್ ಬಂಧಿತರು. ಅವರಿಂದ ಒಂದು ನಾಡ ಪಿಸ್ತೂಲ್‌ ಹಾಗೂ ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ನಾಡ ಪಿಸ್ತೂಲ್‌ ಪ್ರಕರಣ ಸಂಬಂಧ ಈಚೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ನಾಲ್ಕು ಪಿಸ್ತೂಲ್‌ ಹಾಗೂ 18 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರ ಬೆನ್ನಲ್ಲೇ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ತನಿಖೆ ನಡೆಯುತ್ತಿದೆ.

ಪಿಎಸ್‌ಐ ಸುರೇಶ ಕುಮಾರ, ಎಎಸ್‌ಐ ಚಂದ್ರಕಾಂತ, ಕಾನ್‌ಸ್ಟೇಬಲ್‌ಗಳಾದ ರವಿ, ರುದ್ರಗೌಡ, ವಿಠ್ಠಲ, ಚಂದ್ರಶೇಖರ, ಶಿವಲಿಂಗ, ಅಣ್ಣಪ್ಪ, ಮಾಡಬೊಳ ಠಾಣೆಯ ಆನಂದ ಕಾರ್ಯಾಚರಣೆ ನಡೆಸಿದರು. ಯಡ್ರಾಮಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT