ನಗರದ ರಾಜಾಪುರ, ಶಿವಶಕ್ತಿನಗರ, ಕಾಕಡೆನಗರ, ಆಟೊನಗರ, ಫಿಲ್ಟರ್ಬೆಡ್, ಮಹಾತ್ಮಗಾಂಧಿ ಲಾರಿ ತಂಗುದಾಣ ಸೇರಿದಂತೆ ಹಲವು ಕಾಲೊನಿಗಳಲ್ಲಿ ಸಿಸಿ ರಸ್ತೆಗಳಿಲ್ಲದ ಕಾರಣ ಮಳೆ ಬಂದಾಗ ಕೆಸರು ಗದ್ದೆಗಳಿಂದ ಜನರು ಪರದಾಡುವಂತಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.