ಕಲಬುರ್ಗಿ: ಇಲ್ಲಿನ ಡಿಸಿಸಿ ಬ್ಯಾಂಕ್ ವತಿಯಿಂದ ನಗರದ ಪತ್ರಿಕಾ ವಿತರಕರಿಗೆ ಶುಕ್ರವಾರ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸಲಾಯಿತು.
ಬ್ಯಾಂಕಿನ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಕಿಟ್ಗಳನ್ನು ವಿತರಿಸಿದರು. ‘ಕೊರೊನಾದಿಂದ ಕಷ್ಟದಲ್ಲಿರುವವರಿಗೆ ಪ್ರತಿಯೊಬ್ಬರೂ ಸ್ಪಂದಿಸಬೇಕಿದೆ. ಪತ್ರಿಕೆ ವಿತರಣೆ ಮಾಡುವವರು ಪ್ರತಿ ದಿನ ನಗರದಲ್ಲಿ ಸುತ್ತಬೇಕಾಗುತ್ತದೆ. ಅವರ ಜೀವನವೂ ಸಂಕಷ್ಟದಲ್ಲಿದೆ. ಹಾಗಾಗಿ, ಬ್ಯಾಂಕಿನಿಂದ ಕಿಟ್ ವಿತರಿಸಲಾಗುತ್ತಿದೆ’ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಸಜ್ಜನ್, ನಿರ್ದೆಶಕರಾದ ಶರಣ ಬಸಪ್ಪ ಪಾಟೀಲ ಅಷ್ಟಗಾ, ಅಶೋಕ ಸಾವಳೇಶ್ವರ, ಬಾಪುಗೌಡ ಪಾಟೀಲ, ಬಸವರಾಜ ಪಾಟೀಲ, ನಿಂಗಣ್ಣ ದೊಡ್ಮನಿ, ಸಿದ್ರಾಮರಡ್ಡಿ ಕೌಳೂರ, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ಇದ್ದರು.