ಕಮಲಾಪುರ (ಕಲಬುರ್ಗಿ ಜಿಲ್ಲೆ):ಈಜಾಡಲು ಕೆರೆಗಿಳಿದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಹೊಡಿ ಹೊಳ್ಳ ತಾಂಡಾದಲ್ಲಿ ಶುಕ್ರವಾರ ನಡೆದಿದೆ.
ಸತೀಶ್ ವಸಂತ ಜಾಧವ (16) ಮೃತ ಯುವಕ.
ಗುರುವಾರ ಮಧ್ಯಾಹ್ನ 2 ಕ್ಕೆ ನಾಲ್ವರು ಯುವಕರು ಸೇರಿ ಬಂಡನಕೇರಾ ತಾಂಡಾ ಸಮೀಪದ ಕೆರೆಗೆ ಈಜಾಡಲು ಹೋಗಿದ್ದರು. ಸತೀಶ ಒಳಗಡೆ ಮುಳುಗಿದ್ದು ಮೇಲೇಳಲೇ ಇಲ್ಲ ಇಲ್ಲ. ನಂತರ ತಾಂಡಾ ನಿವಾಸಿಗಳಿಗೆ ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಆಗಮಿಸಿ 24 ಗಂಟೆ ಕಾರ್ಯಚರಣೆ ನಡೆಸಿದ್ದು ಗುರುವಾರ ಮಧ್ಯಾಹ್ನ 2 ಕ್ಕೆ ಮೃತ ದೇಹ ಹೊರ ತೆಗೆದಿದ್ದಾರೆ.
ಅಗ್ನಿ ಶಾಮಕ ಠಾಣಾಧೀಕಾರಿ ಶಿವರಾಜ್, ಸಿಬ್ಬಂದಿ ಮಹಾದೇವ, ಅಮರೇಶ, ರಮೇಶ, ವಿಜಯ ಪವಾರ, ವೆಂಕಟ್, ಸುಶೀಲಕುಮಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.