ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಹೇಂದ್ರ ಅವರು ಹ್ಯಾಮ್ಲೆಟ್ ಅನುವಾದ ಕುರಿತು ಮಾತನಾಡಿ, ‘ಶೇಕ್ಸ್ಪಿಯರ್ ಬರೆದಿರುವ ಹ್ಯಾಮ್ಲೆಟ್ ಮೂಲ ನಾಟಕವಲ್ಲ. ಆದರೂ ಅವರ ನಾಟಕದಲ್ಲಿರುವ ಅಂಶಗಳು ರಾಜಕೀಯ ಚಿಂತನೆ ಮತ್ತು ವಿಚಾರಗಳು ಸರ್ವಕಾಲಕ್ಕೂ ಚರ್ಚೆಗೆ ಬರುತ್ತವೆ. ಅವರ ಸಾಹಿತ್ಯ ರಚನೆ ಹಾಗೂ ಸಮಾಕಾಲೀನ ವಸ್ತು ವಿಷಯಗಳ ಗಂಭೀರ ಚಿಂತನೆಗಳಿಗೆ ವಸ್ತುವಾಗಿವೆ. ಹ್ಯಾಮ್ಲೆಟ್ ರಾಜಕೀಯ ಪ್ರೇರಿತ ನಾಟಕವಾದರೆ, ರಕ್ತಾಕ್ಷಿ ಒಂದು ಪ್ರೇಮ ಪ್ರೇರಿತವಾಗಿದೆ‘ ಎಂದರು.