‘ಬಹುತೇಕ ಹಳ್ಳಿ ಹಳ್ಳಿಗಳ ನೀರಿನ ಮೂಲಗಳು ಬತ್ತಿವೆ. ಕುಡಿಯುವ ನೀರಿಗಾಗಿ ಜಮೀನುಗಳಿಗೆ ಅಲೆದಾಟ ಆರಂಭವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕುಡಿಯುವ ನೀರಿನ ಸಹಾಯವಾಣಿ ಕೇಂದ್ರದ ಚಾಲ್ತಿಯಲ್ಲಿರುವ ಸರಿಯಾದ ಸಂಖ್ಯೆ ಪ್ರಕಟಿಸಬೇಕು’ ಎಂದು ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ ಸಿದ್ದು ಧಣ್ಣೂರು, ಮಾಶಾಳ ಗ್ರಾಮ ಪಂಚಾಯಿತಿ ಸದಸ್ಯ ಶಿವು ಪ್ಯಾಟಿ ಒತ್ತಾಯಿಸಿದ್ದಾರೆ.