ನಗರದ ಜಯನಗರ, ದೇವನಗರ, ಮಹಾಲಕ್ಷ್ಮೀ, ಸಂಗಮೇಶ್ವರ, ಭಾವನಪ್ಪ ಬಡಾವಣೆ, ವಿಠ್ಠಲನಗರ ಬಡಾವಣೆ, ಖೂಬಾ ಪ್ಲಾಟ್ ಮತ್ತು ಸಾಯಿನಗರ, ರಾಜಮಹಲ್, ಜೇವರ್ಗಿ ಕಾಲೊನಿ, ವಿದ್ಯಾನಗರ, ಶಕ್ತಿನಗರ, ಕುವೆಂಪು ನಗರ ಹಾಗೂ ವೆಂಕಟೇಶ್ವರ ನಗರ, ಗಾಂಧಿನಗರ, ಬಸವೇಶ್ವರ ನಗರ ಸೇರಿ ಅನೇಕ ಬಡಾವಣೆಯ ಕೆಲ ಕಡೆ ಉದ್ಯಾನಗಳಲ್ಲಿ ಆಸನಗಳಿಲ್ಲ. ವಾಯು ವಿಹಾರಕ್ಕೆ ಪಥವಿಲ್ಲ. ಗಿಡ ಮರಗಳ ನೀರಿನ ದಾಹ ತಣಿಸಲು ಜಲಮೂಲಗಳಿಲ್ಲ. ವಿದ್ಯುತ್ ಸಂಪರ್ಕ ಇಲ್ಲ. ಮಕ್ಕಳಿಗೆ ಆಟದ ಪರಿಕರಗಳಿಲ್ಲ.